ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ವಿ.ಸೋಮಣ್ಣ?
ಕೊಡತಗೇರಿ ಎಕ್ಸ್ಪ್ರೆಸ್ ಡಿಜಿಟಲ್ ಹೌಸ್
ರಾಜ್ಯ ಕಾಂಗ್ರೆಸ್ನಲ್ಲಿ ಪವರ್ ಶೇರಂಗ್ ಪಾಲಿಟಿಕ್ಸ್ ನಡೆಯುತ್ತಿರುವಂತೆ ಬಿಜೆಪಿ ಸರ್ಕಾರದಲ್ಲೂ ಇನ್ನೂ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಪೈಪೋಟಿಗಳು ನಡೆಯುತ್ತಿವೆ. ಬಿಜೆಪಿ ರೆಬೆಲ್ ತಂಡ ದೆಹಲಿಯಲ್ಲಿ ಭಾರೀ ತಂತ್ರಗಾರಿಕೆ ನಡೆಸುತ್ತಿದ್ದು, ವಿ ಸೋಮಣ್ಣ ಭೇಟಿ ಮಾಡಿ ಮಹತ್ವದ ಚರ್ಚೆ ನಡೆಸಿದ್ದಾರೆ.
ಈಗಾಗಲೇ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ರೇಸ್ನಲ್ಲಿರುವ ವಿ. ಸೋಮಣ್ಣ ರನ್ನು ಭೇಟಿ ಮಾಡಿ ರೆಬೆಲ್ ನಾಯಕರು ಮಹತ್ವದ ಸಭೆ ನಡೆಸಿದ್ದಾರೆ. ಇದಾದ ನಂತರ ಸೋಮಣ್ಣಗೆ ಬಿಜೆಪಿ ರೆಬೆಲ್ ತಂಡದ ಬೆಂಬಲ ಸಿಗುತ್ತದಾ ಎಂಬ ಪ್ರಶ್ನೆ ಮೂಡಿದ್ದು, ದೆಹಲಿಯಲ್ಲಿ ನಡೆದ ರಹಸ್ಯ ಭೇಟಿಯೊಂದು ರಾಜ್ಯ ಬಿಜೆಪಿಯಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ.
ಸೋಮಣ್ಣ ಭೇಟಿಯಾದ ರೆಬೆಲ್ ಲೀಡರ್ಸ್: ಮಹತ್ವದ ಚರ್ಚೆ!
ಮಾಜಿ ಸಚಿವ ರಮೇಶ್ ಜಾರಕಿಹೊಳಿ, ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ್ ನೇತೃತ್ವದ ರೆಬೆಲ್ ತಂಡವು ಕೇಂದ್ರ ಸಚಿವ ವಿ. ಸೋಮಣ್ಣ ಅವರನ್ನು ದೆಹಲಿಯಲ್ಲಿಯೇ ಭೇಟಿಯಾಗಿದೆ. ಸೋಮಣ್ಣ ಅವರ ಅಧಿಕೃತ ಕಚೇರಿಯಲ್ಲೇ ನಡೆದ ಈ ಮಾತುಕತೆಯಲ್ಲಿ “ರಾಜ್ಯಾಧ್ಯಕ್ಷ ಸ್ಥಾನಕ್ಕೆ ವಿ. ಸೋಮಣ್ಣ ಅವರಿಗೆ ರೆಬೆಲ್ ತಂಡದ ಬೆಂಬಲ” ಎಂಬ ವಿಷಯವೇ ಪ್ರಮುಖವಾಗಿ ಚರ್ಚೆಯಾಗಿದೆ ಎನ್ನಲಾಗಿದೆ. ಇದರಿಂದ ಮತ್ತೆ ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷ ಸ್ಥಾನದ ಗದ್ದಲ ಶುರುವಾಗುವಂತಿದೆ.
ರೆಬೆಲ್ ತಂಡದ ಹೊಸ ತಂತ್ರ!
ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ನಿರಾಕರಣೆಯಿಂದ ಸಿಡಿಮಿಡಿಗೊಂಡಿದ್ದ ಜಾರಕಿಹೊಳಿ, ಸಿದ್ದೇಶ್ವರ್, ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ, ಮಾಜಿ ಶಾಸಕ ಸಂಜಯ್ಯ ಶಿವರಾಜ್ ಪಾಟೀಲ್ ಸೇರಿದಂತೆ ಹಲವು ರೆಬೆಲ್ ನಾಯಕರು ಈಗಾಗಲೇ ಪಕ್ಷದ ವಿರುದ್ಧ ಗುಡುಗುತ್ತಿದ್ದಾರೆ. ಆದರೆ ಈ ತಂಡ ಈಗ ಪಕ್ಷದೊಳಗೆ ತಮ್ಮ ಪ್ರಾಬಲ್ಯ ತೋರಿಸುವ ಹೊಸ ತಂತ್ರಕ್ಕೆ ಮುಂದಾಗಿದೆ ಎನ್ನಲಾಗುತ್ತಿದೆ. ರಾಜ್ಯಾಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಹೈಕಮಾಂಡ್ ಇನ್ನೂ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ. ಬಿ.ವೈ. ವಿಜಯೇಂದ್ರ ಬದಲಿಗೆ ನೂತನ ಅಧ್ಯಕ್ಷರ ನೇಮಕಕ್ಕೆ ದೆಹಲಿಯಲ್ಲಿ ತೀವ್ರ ಲಾಬಿ ನಡೆಯುತ್ತಿದೆ. ಈ ನಡುವೆ ವಿ. ಸೋಮಣ್ಣ ಅವರ ಹೆಸರು ಗಟ್ಟಿಯಾಗಿ ಕೇಳಿಬರುತ್ತಿದೆ. ಒಕ್ಕಲಿಗ ಸಮುದಾಯದ ಹಿರಿಯ ನಾಯಕ, ಕೇಂದ್ರ ಸಚಿವ ಸ್ಥಾನ ಇದೆಲ್ಲ ಸೋಮಣ್ಣ ಅವರ ಬಲವಾಗಿದೆ.
ರೆಬೆಲ್ ತಂಡಕ್ಕೆ ಏನು ಲಾಭ?
ರೆಬೆಲ್ ತಂಡಕ್ಕೆ ಸೋಮಣ್ಣ ಅವರನ್ನು ಬೆಂಬಲಿಸುವುದರಿಂದ ತಮ್ಮ ಮೌಲ್ಯ ಹೆಚ್ಚಿಸಿಕೊಳ್ಳಬಹುದು ಎಂಬ ಲೆಕ್ಕಾಚಾರ ಇದೆ ಎನ್ನಲಾಗಿದೆ. ನಾವು ಸೋಮಣ್ಣ ಅವರಿಗೆ ಬೆಂಬಲ ನೀಡಿದ್ರೆ, ಭವಿಷ್ಯದಲ್ಲಿ ಟಿಕೆಟ್, ಸ್ಥಾನಮಾನಗಳಲ್ಲಿ ಭಾಗ ದೊರೆಯಬಹುದು ಎಂಬ ಆಲೋಚನೆ ರೆಬೆಲ್ ತಂಡದಲ್ಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ.


More Stories
ಮುಡಾ | CM ಸಿದ್ದರಾಮಯ್ಯ ಪತ್ನಿ ವಿರುದ್ಧದ ಮೇಲ್ಮನವಿ ರದ್ದು: EDಗೆ ಸುಪ್ರೀಂ ಚಾಟಿ
ಸುಳ್ಳು ಪ್ರಕರಣಗಳನ್ನು ದಾಖಲಿಸಿದ ಅಥವಾ ಸಾಕ್ಷ್ಯಗಳನ್ನು ಸೃಷ್ಟಿಸಿದ ಆರೋಪ ಹೊತ್ತಿರುವ ಪೊಲೀಸ್ ಅಧಿಕಾರಿಗಳನ್ನು ವಿಚಾರಣೆಗೆ ಒಳಪಡಿಸಲು ಪೂರ್ವಾನುಮತಿ ಅಗತ್ಯವಿಲ್ಲ ಎಂದು ಸುಪ್ರೀಂ ಕೋರ್ಟ್
ಎಫ್ಸಿಐ ನಾಮನಿರ್ದೇಶಿತ ಸದಸ್ಯರಾಗಿ ದಂಡಿನ ಆಯ್ಕೆ