ಅನ್ನಭಾಗದ ಅಕ್ಕಿ 300 ಕ್ವಿಂಟಾಲ ವಶ
ಕೊಡತಗೇರಿ ಎಕ್ಸ್ಪ್ರೆಸ್ ಡಿಜಿಟಲ್ ಹೌಸ್
ರಾಯಚೂರು: ಪಡಿತರ ಅಕ್ಕಿಯನ್ನು ಖರೀದಿಸಿ ಅಕ್ರಮವಾಗಿ ಸಾಗಿಸಲು ಯತ್ನಿಸುತ್ತಿದ್ದ ಪ್ರಕರಣವೊಂದನ್ನು ಪತ್ತೆಹಚ್ಚಿರುವ ಆಹಾರ ಇಲಾಖೆಯ ಹಾಗೂ ಪೊಲೀಸ್ ಅಧಿಕಾರಿಗಳು ಸಿಂಧನೂರು ತಾಲೂಕಿನ ಶ್ರೀಪುರಂ ಜಂಕ್ಷನ್ ಬಳಿ ಸುಮಾರು 6.6 ಲಕ್ಷ ರೂ. ಮೌಲ್ಯದ 300 ಕ್ವಿಂಟಾಲ್ ಅಕ್ಕಿಯನ್ನು ವಶಕ್ಕೆ ಪಡೆದ ಘಟನೆ ರವಿವಾರ ನಡೆದಿದೆ.
ಈ ಸಂಬಂಧ ಸತೀಶ ಆದೋನಿ ಕರ್ನೂಲ್, ಲಾರಿ ಮಾಲಕ ಹಾಗೂ ಚಾಲಕ ಮುಹಮ್ಮದ್ ಅಫ್ತಾಬ್ ಕೋರಾಜಿಯಾ ಎನ್ನುವವರ ವಿರುದ್ಧ ಆಹಾರ ಇಲಾಖೆ ಅಧಿಕಾರಿ ಹನುಮೇಶ ಬಾಳಪ್ಪ ನೀಡಿರುವ ದೂರಿನನ್ವಯ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿಗಳು ಸಿಂಧನೂರು, ಸಿರಗುಪ್ಪಾ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಜನರಿಗೆ ನ್ಯಾಯಬೆಲೆ ಅಂಗಡಿಯಲ್ಲಿ ಸಿಗುವ ಪಡಿತರ ಅಕ್ಕಿಯನ್ನು ಕೆಜಿಗೆ 15 ರೂ.ಗಳಂತೆ ಖರೀದಿಸುತ್ತಿದ್ದರು. ಈ ರೀತಿ ಖರೀದಿಸಿದ ಅಕ್ಕಿಯನ್ನು ರವಿವಾರ ಬೆಳಗ್ಗೆ ಲಾರಿಯಲ್ಲಿ ಹೇರಿಕೊಂಡು ಲೋಡ್ ಸಿರುಗುಪ್ಪಾ ಕಡೆಗೆ ಸಾಗಿಸುತ್ತಿದ್ದರೆನ್ನಲಾಗಿದೆ. ಈ ಬಗ್ಗೆ ಖಚಿತ ಮಾಹಿತಿಯನ್ನು ಆಧರಿಸಿ ಪೊಲೀಸರು ದಾಳಿ ಮಾಡಿದ್ದಾರೆ.
ದಾಳಿಯ ವೇಳೆ ಲಾರಿಯಲ್ಲಿ ತಲಾ 50 ಕೆಜಿಯ 600 ಚೀಲ ಪಡಿತರ ಅಕ್ಕಿ ಪತ್ತೆಯಾಗಿದೆ. ಲಾರಿ ಹಾಗೂ ಚಾಲಕನನ್ನು ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ.

More Stories
ಯೋಗೇಶ್ ಗೌಡ ಹತ್ಯೆ ಪ್ರಕರಣ: ಮಾಜಿ ಸಚಿವ ವಿನಯ್ ಕುಲಕರ್ಣಿ ಸೇರಿ 17 ಮಂದಿ ದೋಷಿ; 10 ವರ್ಷಗಳ ಬಳಿಕ ಸಿಕ್ಕಿತು ನ್ಯಾಯ!
ಬಡವರ ಪಾಲಿಗೆ ಯುಗಾದಿ ಉಡುಗೊರೆ; ಒಂದೇ ಬಾರಿ 3 ತಿಂಗಳ ಪಡಿತರ ವಿತರಣೆಗೆ ಮುಂದಾದ ಕೇಂದ್ರ ಸರ್ಕಾರ.
ರಾಜ್ಯದಲ್ಲಿ ಎಲೆಕ್ಷನ್ ಹಬ್ಬ: ಮೇ ತಿಂಗಳಲ್ಲಿ ಪಂಚಾಯತ್ ಚುನಾವಣೆ ಖಚಿತ!