ಸೆ, 19 ರಂದು ಭಾಗ್ಯನಗರದಲ್ಲಿ ಕೌದಿ ನಾಟಕ ಪ್ರದರ್ಶನ

ಸೆ, 19 ರಂದು ಭಾಗ್ಯನಗರದಲ್ಲಿ ಕೌದಿ ನಾಟಕ ಪ್ರದರ್ಶನ

ಕೊಡತಗೇರಿ Express ಸುದ್ದಿ

ಕೊಪ್ಪಳ18- ಭಾಗ್ಯನಗರದ ಖೋಡೆ ಕಲ್ಯಾಣ ಮಂಟಪದಲ್ಲಿ ಸೆಪ್ಟೆಂಬರ್ 19ರಂದು ಸಂಜೆ 6.30ಕ್ಕೆ ಕೌದಿ ನಾಟಕ ಪ್ರದರ್ಶನ ಏರ್ಪಡಿಸಲಾಗಿದೆ. ಭಾಗ್ಯನಗರದ ಶಕ್ತಿ ಶಾರದೆ ಮೇಳವು ಈ ನಾಟಕವನ್ನು ಆಯೋಜಿಸಿದೆ.ಗಣೇಶ ಅಮೀನಗಡ ಅವರ ಕೌದಿ ನಾಟಕವನ್ನು ಮೈಸೂರಿನ ಕವಿತಾ ಕಲಾ ತಂಡ ಪ್ರಸ್ತುತಪಡಿಸಲಿದೆ.

ಏಕವ್ಯಕ್ತಿ ನಾಟಕವಾದ ಇದರಲ್ಲಿ ಕಲಬುರಗಿಯ ಭಾಗ್ಯಶ್ರೀ ಪಾಳಾ ಅಭಿನಯಿಸುವರು. ಈ ನಾಟಕಕ್ಕೆ ಸಂಗೀತ ನೀಡಿ, ವಿನ್ಯಾಸಗೊಳಿಸಿ ನಿರ್ದೇಶಿಸಿದವರು ಜಗದೀಶ್‌ ಆರ್. ಜಾಣಿ. ಸಂಗೀತ, ಬೆಳಕನ್ನು ಪದ್ಮಾ ರಾಯಚೂರು ನಿರ್ವಹಿಸುವರು.

ಒಂದು ಗಂಟೆಯ ಈ ನಾಟಕಕ್ಕೆ ಉಚಿತ ಪ್ರವೇಶವಿದೆ ಎಂದು ಪ್ರಕಟಣೆ ತಿಳಿಸಿದ್ದಾರೆ.

<

5G

error: Content is protected !!