ಕುರಿಗಾಹಿ ಬರೆದ ನಾಟಕಗಳು ರಾಜ್ಯಾದ್ಯಂತ ಪ್ರದರ್ಶಿಸುತ್ತಿವೆ : ಕೊಡತಗೇರಿ
ಕೊಡತಗೇರಿ ಎಕ್ಸಪ್ರೆಸ್ ಸುದ್ದಿ
ಗಜೇಂದ್ರಗಡ : ಗಂಡುಗಲಿ ವೀರ ಪರಶುರಾಮ ಎಂಬ ನಾಟಕವನ್ನು ಅಷ್ಟೋಂದು ವಿದ್ಯಾವಂತನಲ್ಲದ ಕವಿಗಳಾದ ಡಿ.ಆರ್. ಪೂಜಾರ ಅವರು ಬರೆದಿದ್ದಾರೆ . ಅವರ ಬರೆದ ನಾಟಕಗಳು ಇಂದು ಪ್ರತಿದಿನ ಒಂದಿಲ್ಲೊಂದು ಊರಲ್ಲಿ ಪ್ರದರ್ಶನ ಕೊಳ್ಳುತ್ತಿವೆ ಎಂದು ವಕೀಲರಾದ ಕೆ.ಎಸ್.ಕೊಡತಗೇರಿ ಯವರು ಹೇಳಿದರು.
ಅವರು ರಾಜೂರ ಗ್ರಾಮದಲ್ಲಿ ಶ್ರೀ ಬೀರಲಿಂಗೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಶ್ರೀ ಬರಲಿಂಗೇಶ್ವರ ನಾಟ್ಯ ಸಂಘ ರಾಜೂರ ಅವರು ಹಮ್ಮಿಕೊಂಡಿದ್ದ ಗಂಡುಗಲಿ ವೀರಪರಶುರಾಮ ನಾಟಕದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ರಂಗಭೂಮಿ ಕಲೆ ಒಂದು ಅದ್ಭುತವಾದಂತಹ ಮನರಂಜನೆಯನ್ನು ನೀಡುವಂತಹ ಕಲೆಯಾಗಿದ್ದು ಈ ಕಲಿಯು ಗ್ರಾಮೀಣ ಸೊಗಡನ್ನು ಎತ್ತಿ ತೋರಿಸ್ತದೆ ಇಂತಹ ಕಲೆಗಳು ನಮ್ಮ ಗ್ರಾಮದಲ್ಲಿ ಇಂದಿಗೂ ಕೂಡ ಉಳಿದಿರುತ್ತವೆ ಎಂದರೆ ನಿಮ್ಮಂತಹ ಕಲಾ ರಸಿಕರ ಆಶೀರ್ವಾದವೇ ಕಾರಣ ಎಂದು ಹೇಳಿದರು.
ನಾಟಕವನ್ನು ಮಾಡಿದ ಪೋಲಿಸ್ ಅಧಿಕಾರಿ ರಂಗನಾಥ್ ಡೊಳ್ಳಿನ ಮಾತನಾಡಿ ಕಲೆಯು ಎಲ್ಲರನ್ನೂ ಆಕರ್ಷಿಸುತ್ತದೆ. ಆದರೆ ಕೆಲವರನ್ನು ಮಾತ್ರ ಆಯ್ಕೆ ಮಾಡಿಕೊಳ್ಳುತ್ತದೆ ಅಂತಹ ಕಲಾವಿದರು ರಾಜೂರಿನಲ್ಲಿ ಅನೇಕರು ಇರುವುದರಿಂದ ಪ್ರತಿ ವರ್ಷ ಮೂರ್ನಾಲ್ಕು ನಾಟಕಗಳು ಕಲಾವಿದರಿಂದ ಆಡುತ್ತಾರೆ. ಅಂತಹ ಕಲಾವಿದರನ್ನು ಭಂಡಾರದ ಒಡೆಯ ಬೀರಲಿಂಗೇಶ್ವರ ಸದಾ ಆಶೀರ್ವದಿಸಿರುತ್ತಾನೆ ಅಂತಹ ಕಲೆಯು ಗ್ರಾಮದಲ್ಲಿ ಹೆಚ್ಚು ಹೆಚ್ಚು ಪ್ರದರ್ಶಿಸಲಿ ಸದಾ ಕಲಾ ದೇವತೆ ಎಲ್ಲ ಕಲಾವಿದರು ಆಶೀರ್ವದಿಸಲಿ ಎಂದು ಹೇಳಿದರು.
ನಂತರ ಮಾತನಾಡಿದ ಹೋರಾಟಗಾರ ಶರಣು ಪೂಜಾರಿ ಮಾತನಾಡಿ ನಾಟಕಗಳು ನಮ್ಮ ಬದುಕಿಗೆ ಹತ್ತಿರವಾಗಿರುತ್ತದೆ ಅಂತಹ ಹತ್ತಿರವಾದ ಒಳ್ಳೆಯ ಪಾತ್ರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುತ್ತಾ ಕೆಟ್ಟ ಪಾತ್ರಗಳ ಸಂದೇಶಗಳನ್ನು ಇಲ್ಲೇ ಮರೆಯೋಣ ರಂಗಭೂಮಿಯ ಕಲೆಯನ್ನು ಎಲ್ಲರೂ ಪ್ರೋತ್ಸಾಹಿಸೋಣ ಎಂದರು.ಕಾರ್ಯಕ್ರಮದ ಸಾನಿಧ್ಯವನ್ನು ಸಂಗಯ್ಯಜ್ಜ ಹಿರೇಮಠ ಅವರು ಕಳಕಯ್ಯಜ್ಜನವರು ವಹಿಸಿದ್ದರು. ಕಾರ್ಯಕ್ರಮದಲ್ಲಿ ಕೆಡಿಪಿ ಸದಸ್ಯ ಸುರೇಶಗೌಡ್ರು, ಶರಣಪ್ಪ ಹಾದಿಮನಿ, ಸಂತೋಷ ಹಳ್ಳದ, ಮಲ್ಲಪ್ಪಹಾಸಿಮನಿ , ಅಜ್ಜನ ಅವರು, ಸಂಕ್ರಿಯವರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
More Stories
ಪೋಲಿಸರು ಪೋನ್ ಕರೆ ಮೂಲಕ ಪೊಲೀಸ್ ಠಾಣೆಗೆ ಕರೆಸಿಕೊಳ್ಳಲು ಸಾಧ್ಯವಿಲ್ಲ
28 ಕ್ಕೆ ಸೌಹಾರ್ದ ಇಫ್ತಾರ ಕೂಟ : ಶಿಕ್ಷಕ ಬಾಗವಾನ
ಸೆ, 19 ರಂದು ಭಾಗ್ಯನಗರದಲ್ಲಿ ಕೌದಿ ನಾಟಕ ಪ್ರದರ್ಶನ