ಸೆಕೆಂಡ್​ ಹ್ಯಾಂಡ್​​ ಮೊಬೈಲ್ ಬಗ್ಗೆ ಎಚ್ಚರ!: ಬೆಂಗಳೂರಿನಲ್ಲಿ ​6 ತಿಂಗಳಲ್ಲಿ 2,350 ಅಕೌಂಟ್​ಗೆ ಕನ್ನ..!

ಸೆಕೆಂಡ್​ ಹ್ಯಾಂಡ್​​ ಮೊಬೈಲ್ ಬಗ್ಗೆ ಎಚ್ಚರ!: ಬೆಂಗಳೂರಿನಲ್ಲಿ ​6 ತಿಂಗಳಲ್ಲಿ 2,350 ಅಕೌಂಟ್​ಗೆ ಕನ್ನ..!

ಕೊಡತಗೇರಿ ಎಕ್ಸಪ್ರೆಸ್ ಸುದ್ದಿ

ಬೆಂಗಳೂರು(ಜು.17): ನಿಮ್ಮ ಬಳಿ ಹೈಫೈ ಮೊಬೈಲ್​ ಪೋನ್​ ಇದ್ದು ಅದಕ್ಕೆ ಇಂಟರ್​ನೆಟ್​ ಕನೆಕ್ಷನ್​ ಇದ್ಯಾ? ನೀವು ನಿಮ್ಮ ಆಂಗೈಯಲ್ಲೇ ನಿಮ್ಮ ಬ್ಯಾಂಕ್​ ಆಕೌಂಟ್​ಗಳನ್ನ ನಿರ್ವಹಣೆ ಮಾಡ್ತಿದೀರಾ? ಬೀ ಕೇರ್​ ಪುಲ್. ನಿಮಗೆ ಅರಿವಿಲ್ಲದೇ ಸೈಲೆಂಟಾಗಿ ಹಣ ಎಗರಿಸುವ ಗ್ಯಾಂಗ್ ನಿಮ್ಮ ಮೊಬೈಲ್​ ಪೋನ್​ನಲ್ಲೇ ಇದೆ.

ಆದ್ರಲ್ಲೂ ಮಧ್ಯಮ ವರ್ಗದ ಜನ ಸೆಕೆಂಡ್​​ ಹ್ಯಾಂಡ್​ ಮೊಬೈಲ್​ಗಳ ಮೊರೆ ಹೋಗುತ್ತಾರೆ. ಇಂತಹ ಸೆಕೆಂಡ್​ ಹ್ಯಾಂಡ್​ ಮೊಬೈಲ್​ಗಳಲ್ಲಿ ಹ್ಯಾಕರ್ಸ್​ ವೈರಸ್​ ಮತ್ತು ಜಂಕ್​ ಆ್ಯಪ್​ಗಳನ್ನು ಅಳವಡಿಸಿ ನಿಮಗೆ ಕೊಡುತ್ತಾರೆ. ನಿಮ್ಮ ಹಣ ಎಗರಿಸಲು ಇಷ್ಟೆ ಸಾಕು. ವೈರಸ್​ ಮೂಲಕ ನಿಮ್ಮ ಮೊಬೈಲ್​ನ ಬ್ಯಾಂಕ್​ ಖಾತೆ ಮಾಹಿತಿಗೆ ಕನ್ನ ಹಾಕ್ತಾರೆ. ಬಳಿಕ ಮೊಬೈಲ್​ ನೆಟ್​ವರ್ಕ್​ ಸರಿಮಾಡ್ತೀವಿ ಎಂದು ನಿಮಗೆ ಬಂದಿರೋ ಒಟಿಪಿ ನಂಬರ್​ ನಿಮ್ಮಿಂದಲೇ ಕೇಳಿ ಪಡೆದು ನಿಮ್ಮ ಬ್ಯಾಂಕ್​ ಆಕೌಂಟ್​ ಗುಡಿಸಿ ಗುಂಡಾಂತರ ಮಾಡ್ತಾರೆ.
ಸಿಮ್​ ಕಾರ್ಡ್​ ಪಿನ್​ನಿಂದ ಹಾಕ್ತಾರೆ ಕನ್ನ..!

ಹ್ಯಾಕರ್​ಗಳಿಗೆ ಬರೀ ಮೊಬೈಲ್​ಗಳಲ್ಲಿ ಅಲ್ಲದೇ ನಿಮ್ಮ ಮೊಬೈಲ್​ನ ಸಿಮ್​ ಕಾರ್ಡ್​ನ 20 ಸಂಖ್ಯೆಯ ಪಿನ್​ ಮೂಲಕ ಕದಿಯೋದ್ರಲ್ಲೂ ಎಕ್ಸ್​ಪರ್ಟ್​. ನಿಮ್ಮ ಮೊಬೈಲ್​ಗೆ ನಿಮ್ಮ ಸಿಮ್​ ಕಾರ್ಡ್​ ನೆಟ್​ವರ್ಕ್​ ಸರಿಯಿಲ್ವಾ, ಸಿಗ್ನಲ್​ ಡ್ರಾಪ್​ ಆಗ್ತಿದಿಯಾ ಅಂತ ಎಸ್​ಎಂಎಸ್​ ಕಳಿಸಿ ನಿಮ್ಮ ಸಿಮ್​ ಮಾಹಿತಿ ಕದೀತಾರೆ. ಇಷ್ಟಕ್ಕೆ ನಿಮ್ಮ ಹಣದ ಜೇಬಿಗೆ ಕನ್ನ ಹಾಕೋಕೆ ನೀವೇ ಅನುಮತಿ ಕೊಟ್ಟಂತೆ.

ದೇಶದ ಐಟಿಬಿಟಿ ಕ್ಯಾಪಿಟಲ್​ ಆಂತ ಹೆಸರು ಗಳಿಸಿರೋ ಬೆಂಗಳೂರಿನಲ್ಲಿ ಆತ್ಯಧಿಕವಾಗಿ ಹಣ ಕಳೆದುಕೊಂಡ ಕೇಸ್​ಗಳು ದಾಖಲಾಗಿವೆ. ಸಿಲಿಕಾನ್​ ಸಿಟಿಯ ಬುದ್ಧಿವಂತರು, ವಿದ್ಯಾವಂತ ಜನರೇ ಬ್ಯಾಂಕ್​ ಹ್ಯಾಕರ್​ಗಳಿಗೆ ಪುಲ್​ ಮೀಲ್ಸ್​ ಆಗಿ ಬಿಟ್ಟಿದ್ದಾರೆ. ಬ್ಯಾಂಕ್​ ಖಾತೆ ಸರಿಪಡಿಸೋ ನೆಪದಲ್ಲಿ ಫೇಕ್​ ಕಾಲ್​ ಮಾಡೋ ಖದೀಮರಿಗೆ ಬ್ಯಾಂಕ್​ ಆಕೌಂಟ್​, ಡೆಬಿಟ್​ ಕಾರ್ಡ್​ ಮತ್ತು ಕ್ರೆಡಿಟ್​ ಕಾರ್ಡ್​ಗಳ ಮಾಹಿತಿ ಕೊಟ್ಟು ಕೈಸುಟ್ಟು ಕೊಳ್ತಿದ್ದಾರೆ. ಹೀಗೆ ಬೆಂಗಳೂರು ನಗರದಲ್ಲಿ ದಿನವೊಂದಕ್ಕೆ 7ರಿಂದ 10 ಕೇಸ್​ಗಳು ದಾಖಲಾಗುತ್ತಿವೆ.
ಆನ್​ಲೈನ್​ನಲ್ಲಿ ಈಸಿಯಾಗಿ ಮೋಸ ಮಾಡುತ್ತಾರೆ ಎನ್ನುವ ಜ್ಞಾನ ಇದ್ದರೂ, ಉದ್ಯಾನನಗರಿ ಜನ ತಮ್ಮ ಬ್ಯಾಂಕ್​ ಖಾತೆಗಳ ಮಾಹಿತಿ ಕೊಟ್ಟು ಕೆಲವೇ ಕ್ಷಣಗಳಲ್ಲಿ ಹಣ ಕಳೆದುಕೊಳ್ತಿರೋದು ವಿಪರ್ಯಾಸ.

You may have missed

ಸಿದ್ದರಾಮಯ್ಯ: ಅರಸು ದಾಖಲೆ ಸರಿಗಟ್ಟಿದ ‘ಅಹಿಂದ’ ಚಾಣಕ್ಯ – ಜನಪರ ಆಡಳಿತದ ಹೊಸ ಪರ್ವ ​ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ದೀರ್ಘಕಾಲ ಮುಖ್ಯಮಂತ್ರಿಯಾಗಿ ರಾಜ್ಯವಾಳಿದ ಕೀರ್ತಿ ಈವರೆಗೆ ದಿವಂಗತ ಡಿ. ದೇವರಾಜ ಅರಸು (7 ವರ್ಷ 239 ದಿನಗಳು) ಅವರಿಗೆ ಸಲ್ಲುತ್ತಿತ್ತು. ಆದರೆ, ಜನವರಿ 7, 2026ರಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಐತಿಹಾಸಿಕ ದಾಖಲೆಯನ್ನು ಮುರಿದು, ಕರ್ನಾಟಕದ ಇತಿಹಾಸದಲ್ಲಿ ಅತಿ ಸುದೀರ್ಘ ಕಾಲ ಆಡಳಿತ ನಡೆಸಿದ ನಾಯಕನಾಗಿ ಹೊರಹೊಮ್ಮಿದ್ದಾರೆ. ಇದು ಕೇವಲ ಅಂಕಿ-ಅಂಶಗಳ ಸಾಧನೆಯಲ್ಲ, ಬದಲಿಗೆ ಅವರ ಅಚಲ ಸಿದ್ಧಾಂತ ಮತ್ತು ಜನಪ್ರಿಯತೆಯ ಪ್ರತೀಕವಾಗಿದೆ. ​ಅರಸು ಮತ್ತು ಸಿದ್ದರಾಮಯ್ಯ: ಸಮಾಜಮುಖಿ ಹೋಲಿಕೆ ​ದೇವರಾಜ ಅರಸು ಅವರು ಹೇಗೆ ಭೂ ಸುಧಾರಣೆ ಮತ್ತು ಹಿಂದುಳಿದ ವರ್ಗಗಳ ಸಬಲೀಕರಣದ ಮೂಲಕ ‘ಕರ್ನಾಟಕದ ಕ್ರಾಂತಿಕಾರಿ ನಾಯಕ’ ಎನಿಸಿಕೊಂಡರೋ, ಸಿದ್ದರಾಮಯ್ಯನವರು ‘ಅಹಿಂದ’ (ಅಲ್ಪಸಂಖ್ಯಾತ, ಹಿಂದುಳಿದ ಮತ್ತು ದಲಿತ) ವರ್ಗಗಳ ಧ್ವನಿಯಾಗಿ ಅದೇ ಹಾದಿಯಲ್ಲಿ ಮುನ್ನಡೆದಿದ್ದಾರೆ. ಮೈಸೂರು ಮಣ್ಣಿನ ಈ ಇಬ್ಬರು ನಾಯಕರು ಶೋಷಿತ ಸಮುದಾಯಗಳಿಗೆ ರಾಜಕೀಯ ಅಸ್ತಿತ್ವ ತಂದುಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ​ಉತ್ತಮ ಆಡಳಿತದ ಪ್ರಮುಖ ಮೈಲಿಗಲ್ಲುಗಳು ​ಸಿದ್ದರಾಮಯ್ಯನವರ ಆಡಳಿತವನ್ನು ಶ್ಲಾಘಿಸಲು ಮುಖ್ಯ ಕಾರಣ ಅವರ ‘ಜನಪರ ಯೋಜನೆಗಳು’. ಅವರ ಆಡಳಿತ ವೈಖರಿಯಲ್ಲಿ ಆರ್ಥಿಕ ಶಿಸ್ತು ಮತ್ತು ಸಾಮಾಜಿಕ ಭದ್ರತೆಯ ಸುಂದರ ಸಮನ್ವಯವಿದೆ: ​ಭಾಗ್ಯಗಳ ಸರಣಿ: ಮೊದಲ ಅವಧಿಯಲ್ಲಿ (2013-18) ಜಾರಿಗೆ ತಂದ ‘ಅನ್ನಭಾಗ್ಯ’, ‘ಕ್ಷೀರಭಾಗ್ಯ’, ‘ಇಂದಿರಾ ಕ್ಯಾಂಟೀನ್’ನಂತಹ ಯೋಜನೆಗಳು ಬಡವರ ಹಸಿವು ನೀಗಿಸುವಲ್ಲಿ ಮೈಲಿಗಲ್ಲಾದವು. ​ಪಂಚ ಗ್ಯಾರಂಟಿಗಳು: ಎರಡನೇ ಅವಧಿಯಲ್ಲಿ ಜಾರಿಗೆ ತಂದ ಐದು ಗ್ಯಾರಂಟಿಗಳು (ಗೃಹಲಕ್ಷ್ಮಿ, ಶಕ್ತಿ, ಗೃಹಜ್ಯೋತಿ, ಅನ್ನಭಾಗ್ಯ, ಯುವನಿಧಿ) ಇಂದು ರಾಜ್ಯದ ಕೋಟ್ಯಂತರ ಕುಟುಂಬಗಳಿಗೆ ಆರ್ಥಿಕ ಆಸರೆಯಾಗಿವೆ. ​ಆರ್ಥಿಕ ತಜ್ಞತೆ: ರಾಜ್ಯದ ಇತಿಹಾಸದಲ್ಲೇ ಅತಿ ಹೆಚ್ಚು ಅಂದರೆ 16 ಬಾರಿ ಬಜೆಟ್ ಮಂಡಿಸಿದ ಹೆಗ್ಗಳಿಕೆ ಇವರದು. ಆರ್ಥಿಕ ಕೊರತೆಯನ್ನು ಹತೋಟಿಯಲ್ಲಿಟ್ಟುಕೊಂಡು ಅಭಿವೃದ್ಧಿ ಕೆಲಸಗಳಿಗೆ ಹಣ ಮೀಸಲಿಡುವ ಇವರ ಚಾಣಕ್ಯತನ ಮೆಚ್ಚುವಂತದ್ದು. ​ನುಡಿದಂತೆ ನಡೆದ ಸರ್ಕಾರ: ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳನ್ನು ಈಡೇರಿಸುವಲ್ಲಿ ಅವರು ತೋರಿದ ಬದ್ಧತೆ ಮತದಾರರಲ್ಲಿ ಅವರ ಮೇಲಿನ ವಿಶ್ವಾಸವನ್ನು ಹೆಚ್ಚಿಸಿದೆ. ​ತಳಮಟ್ಟದ ನಾಯಕತ್ವ ​ಸಿದ್ದರಾಮಯ್ಯನವರು ಯಾವುದೇ ‘ಹೈಕಮಾಂಡ್’ ನೆರಳಿನಲ್ಲದೆ, ಹಳ್ಳಿ ಹಳ್ಳಿಯ ಜನರೊಂದಿಗೆ ಬೆರೆತು ಬೆಳೆದ ನಾಯಕ. ಅವರ ನೇರ ನುಡಿ, ತರ್ಕಬದ್ಧ ಮಾತುಗಳು ಮತ್ತು ಸಂವಿಧಾನದ ಮೇಲಿನ ಗೌರವ ಅವರನ್ನು ಶ್ರೇಷ್ಠ ಸಂಸದೀಯ ಪಟುವನ್ನಾಗಿ ಮಾಡಿದೆ. ​”ಅಧಿಕಾರ ಎನ್ನುವುದು ಕೇವಲ ಕುರ್ಚಿಯಲ್ಲ, ಅದು ಬಡವರ ಕಣ್ಣೀರು ಒರೆಸುವ ಅವಕಾಶ” ಎಂಬ ಸಿದ್ಧಾಂತದೊಂದಿಗೆ ಅವರು ಮುನ್ನಡೆಯುತ್ತಿರುವುದು ಇಂದಿನ ರಾಜಕಾರಣಿಗಳಿಗೆ ಮಾದರಿಯಾಗಿದೆ. ​ಸಮಾರೋಪ ​ದೇವರಾಜ ಅರಸು ಅವರ ದಾಖಲೆಯನ್ನು ಸರಿಗಟ್ಟಿರುವ ಸಿದ್ದರಾಮಯ್ಯನವರು, ಕರ್ನಾಟಕದ ಸಾಮಾಜಿಕ ನಕ್ಷೆಯಲ್ಲಿ ತಮ್ಮದೇ ಆದ ಅಳಿಸಲಾಗದ ಛಾಪನ್ನು ಒತ್ತಿದ್ದಾರೆ. ಅವರ ಈ ಪಯಣ ಕೇವಲ ಸುದೀರ್ಘ ಅವಧಿಯದ್ದಷ್ಟೇ ಅಲ್ಲದೆ, ‘ಸಮ ಸಮಾಜ’ದ ನಿರ್ಮಾಣದ ಹಾದಿಯಲ್ಲಿ ಒಂದು ಭರವಸೆಯ ನಡಿಗೆಯಾಗಿದೆ.

error: Content is protected !!