ದಾರಿ ತಪ್ಪುತ್ತಿದಿಯಾ ರಂಗಭೂಮಿ

ದಾರಿ ತಪ್ಪುತ್ತಿದಿಯಾ ರಂಗಭೂಮಿ ?

ಕೊಡತಗೇರಿ Express news

ಕರ್ನಾಟಕ ಕಲೆ ಸಂಸ್ಕೃತಿ, ಜಾನಪದ, ನಾಟಕಗಳಿಂದ ಹೆಸರುವಾಸಿಯಾಗಿದ್ದು ಅದರಲ್ಲಿ ಉತ್ತರ ಕರ್ನಾಟಕದಲ್ಲಿ ಅತಿ ಹೆಚ್ಚು ಸಮಾಜಿಕ ನಾಟಕಗಳು ಪ್ರದರ್ಶನ ಗೊಳ್ಳುವದನ್ನು ನಾವು ಕಾಣುತ್ತಿದ್ದೇವೆ ಹೌದು ಈ ಹಿಂದೆ ನಾಟಕಗಳು ಎಂದರೆ ಕಂಪನಿ ನಾಟಕಗಳು ಹೆಸರು ವಾಸಿಯಾಗುತ್ತಿದ್ದವು ಅವುಗಳ ನಡುವೆ ಇತ್ತಿಚಿಗೆ ಹೆಚ್ಚು ಪ್ರದರ್ಶನಗೊಳ್ಳುವ ನಾಟಗಳು ಎಂದರೆ ಹವ್ಯಾಸಿ ರಂಗಭೂಮಿ ಕಲಾವಿದರು ಹೆಚ್ಚು‌ನಾಟಕಗಳನ್ನು ಪ್ರತಿಹಳ್ಳಿಗಳಲ್ಲಿ ವರ್ಷಕ್ಕೆ ಮೂರು ನಾಲ್ಕು ನಾಟಕಗಳನ್ನು ಒಂದು ಹಳ್ಳಿಯಲ್ಲಿ ಆಡುತ್ತಾರೆ . ಹೌದು ಇತ್ತಿಚಿನ ದಿನಮಾಗಳಲ್ಲಿ ‌ಮತ್ತು ಈ ತಂತ್ರಜ್ಞಾನ ಯುಗದಲ್ಲಿ ಮೋಬೈಲಗಳ ಹಾವಳಿಯಲ್ಲಿಯು ಕೂಡ ನಾಟಕಗಳು ಎಂದು ತಮ್ಮ ಪ್ರಭಾವನ್ನು ಕಳೆದುಕೊಂಡಿಲ್ಲಾ ಸಿನಿಮಾ ಥೇಟರಗಳೆ ನಿಂತು ಹೋಗಿವೆ ಆದರೆ ನಾಟಕಗಳಲ್ಲಿ ಇತ್ತಿಚಿಗೆ ಅಶ್ಲೀಲ ಪದಗಳ ಬಳಕೆ ಸಾಕಷ್ಟು ನೆಡೆಯುತ್ತಿದ್ದವು ಅದನ್ನು ಮುಂದುವರೆದು ನಾಟಕಗಳಲ್ಲಿ ಅಶ್ಲೀಲ ಡ್ಯಾನ್ಸ್ ಗಳು ಕೂಡ ಕಾಲಿಟ್ಟವು ಎಲ್ಲೋ ಕ್ಲಬ್ ಗಳಲ್ಲಿ ಮತ್ತು ನಾಲ್ಕು ಗೊಡೆಗಳ ಮದ್ಯ ನೆಡೆಯಬೇಕಾದ ಮೋಜು ಮಸ್ತಿ ಡ್ಯಾನ್ಸಗಳು ನಾಟಕದಲ್ಲಿ ನೆಡೆಯುವದರಿಂದ ಗೌರವ ಕುಟಂಬಸ್ಥರು ಹೆಣ್ಣು ಮಕ್ಕಳು ನಾಟಕಗಳನ್ನು ನೋಡಲು ಹಿಂದು‌ ಮುಂದು ನೋಡುತ್ತಿದ್ದಾರೆ. ಅದರಲ್ಲಿ ಮತ್ತೆ ಮುಂದು ವರೆದು ಪಾತ್ರಗಳಲ್ಲಿ ಅಭಿನಯ ಮಾಡುವ ಮತ್ತು ಉತ್ತಮ ಪಾತ್ರಮಾಡುವ ಪಾತ್ರಾಧಾರಿಗಳ ಮಹಿಳಾ ನಟಿಯವರು ಕೇಲವರು ಅತಿರೇಕದ ರೀತಿಯಾಗಿ ರಂಗಭೂಮಿಯಲ್ಲಿ ವರ್ತಿಸುವದರಿಂದ ನಿಜವಾದ ಕಲೆ ಪ್ರದರ್ಶಿಸುವ ನಟಿಯರು ಸ್ವಲ್ಪ ತಲೆ ತಗ್ಗಿಸುವಹಾಗೆ ಆಗಿದೆ ಇದರಿಂದ ತನ್ನದೆ ತನ್ನತನವನ್ನು ಇಟ್ಟುಕೊಂಡು ಪ್ರಾಚೀನಕಾಲದಿಂದಲೂ ರಂಗಭೂಮಿ ಎಂದು ಈ ರೀತಿಯಾಗಿ ದಾರಿ ತಪ್ಪಿಲ್ಲಾ ಇಂತಹ ಅಶ್ಲೀಲತೆ‌ ನಟನೆಯನ್ನು ಮಾಡುವುದರಿಂದ ರಂಗ ಭೂಮಿಯು ದಾರಿ ತಪ್ಪುತ್ತಿದೆ ಎಂಬ ಭಾಸ ಕಲಾಪ್ರೇಮಿಗಳಲ್ಲಿ ಕಾಡುತ್ತಿದೆ.

ಬಾಕ್ಸ್ news : 

ಇತ್ತಿಚಿಗೆ ಹವ್ಯಾಸಿ ನಾಟಕಗಳಲ್ಲಿ ಅಶ್ಲೀಲ ತೆ ಪಾತ್ರಗಳು ಮಾಡುವದರಿಂದ ನಮ್ಮಂತಹ ನಟಿಯರು ರಂಗಭೂಮಿಯಿಂದ ದೂರ ಸರಿಯಬೇಕು ಅನ್ನಿಸುತ್ತಿರುವದು ಸತ್ಯ. ಇಂತಹ ದೃಶಗಳು ಸಮಾಜಕ್ಕೆ ಮಾರಾಕ .

ಹೆಸರು ಹೇಳದ ನಟಿಯ ಮಾತು.

ಬಾಕ್ಸ್ news 

ನಾಟಕಗಳು ಸಮಾಜವನ್ನು ತಿದ್ದವಂತಹ ಕೆಲಸವನ್ನು ಮಾಡಬೇಕು ಅತೀರೇಕದ ಇಂತಹ ನಟನೆಗಳಿಂದ ಏನು ಪ್ರಯೋಜನ ಇಲ್ಲಾ.

– ಬಸವರಾಜ ರಂಗಭೂಮಿ ಕಲಾವಿದ.

ಲೇಖಕ : ಕೆ.ಎಸ್.ಕೊಡತಗೇರಿ 

ಬರಹಗಾರರು .

ಮೋ : 9483768882

error: Content is protected !!