ಕೆ.ಎಸ್.ಕೊಡತಗೇರಿ ಅವರಿಗೆ ರಾಜ್ಯಮಟ್ಟದ ಡಿ.ವಿ. ಗುಂಡಪ್ಪ ಪ್ರಶಸ್ತಿ ಪ್ರಧಾನ

 

ಕೆ.ಎಸ್.ಕೊಡತಗೇರಿ ಅವರಿಗೆ ರಾಜ್ಯಮಟ್ಟದ ಡಿ.ವಿ. ಗುಂಡಪ್ಪ ಪ್ರಶಸ್ತಿ ಪ್ರಧಾನ

ಕೊಡತಗೇರಿ ಎಕ್ಸ್‌ಪ್ರೆಸ್‌ ಸುದ್ದಿ

ಕೊಪ್ಪಳ : ಕರವೇ ಯುವಸೈನ್ಯ ರಾಜ್ಯಾಧ್ಯಕ್ಷ ಹಾಗೂ ನ್ಯಾಯವಾದಿಗಳು ಕೆ.ಎಸ್.ಕೊಡತಗೇರಿ ಅವರಿಗೆ ಧ್ರುವನ್ಯೂಸ್ ವಾರಪತ್ರಿಕೆ ವತಿಯಿಂದ ಕೊಪ್ಪಳದ ತಾಲೂಕ ಪಂಚಾಯಿತಿ ಸಭಾಂಗಣದಲ್ಲಿ ಪತ್ರಿಕಾ ದಿನಾಚರಣೆ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭದಲ್ಲಿ ರಾಜ್ಯಮಟ್ಟದ ಡಿ.ವಿ. ಗುಂಡಪ್ಪ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಪತ್ರಿಕಾ ರಂಗದ ಸೇವೆ, ಹಾಗೂ ಸಮಾಜ ಸೇವೆಯನ್ನು ಗುರುತಿಸಿ ಕೆ.ಎಸ್.ಕೊಡತಗೇರಿ ಅವರಿಗೆ ರಾಜ್ಯಮಟ್ಟದ ಡಿ.ವಿ. ಗುಂಡಪ್ಪ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಈ ಸಂದರ್ಭದಲ್ಲಿ ಹೆಬ್ಬಾಳ ಸಂಸ್ಥಾನ ಮಠದ ನಾಗಭೂಷಣ ಶಿವಾಚಾರ್ಯ ಮಹಾಸ್ವಾಮಿಗಳು, ಸುವರ್ಣ ಕರ್ನಾಟಕ ರಕ್ಷಣಾ ಸೈನ್ಯದ ಅಧ್ಯಕ್ಷರಾದ ಟಿಕ್ಯಾ ನಾಯಕ, ನವ ನಿರ್ಮಾಣ ವೇದಿಕೆಯ ರಾಜ್ಯ ಸಂಚಾಲಕರಾದ ವಿಜಯಕುಮಾರ ಕವಲೂರು, ಪತ್ರಕರ್ತರಾದ ಎಚ್. ಎಸ್. ಹರೀಶ, ಎಂ. ಸಾಧಿಕಲಿ, ಜಿ.ಎಸ್. ಗೋನಾಳ ಕೆ.ಎಸ್. ಕೊಡತಗೇರಿ ಕರವೇ ರಾಜ್ಯ ಅದ್ಯಕ್ಷರು.ಸಾವಿತ್ರಿ ಮುಜುಮದಾರ, ಹಿರಿಯರಾದ ಯಮನೂರಪ್ಪ ಸಿಂಗನಾಳ, ಸಿದ್ದು ಹಿರೇಮಠ, ಬಿ.ಎಂ.ಹಿರೇಮಠ, ಎಂ.ಎನ್. ಕುಂದಗೋಳ, ಎಂ. ಆರ್ .ಹಿರೇಮನಿ, ಶರಣಯ್ಯಸ್ವಾಮಿ ಮರಳಿಮಠ, ಪಂಪಯ್ಯಸ್ವಾಮಿ ಹಿರೇಮಠ, ಹಿರಿಯರಾದ ವೀರೇಶ ಹಿರೇಮಠ, ಗೋವಿಂದರಾಜ ಬೂದಗುಂಪಾ ಜಿ.ಎಂ. ಶಿವಪುರ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಕೊಪ್ಪಳ :

error: Content is protected !!