ಗೋಗೇರಿಯಲ್ಲಿ ಫೆಬ್ರವರಿ 5 ರಂದು ಭವ್ಯ ಸಾಮಾಜಿಕ ನಾಟಕ ಪ್ರದರ್ಶನ: ‘ಅಣ್ಣನ ಸೋಲು ತಂಗಿಯ ಗೆಲುವು’

ಗೋಗೇರಿಯಲ್ಲಿ ಫೆಬ್ರವರಿ 5 ರಂದು ಭವ್ಯ ಸಾಮಾಜಿಕ ನಾಟಕ ಪ್ರದರ್ಶನ: ‘ಅಣ್ಣನ ಸೋಲು ತಂಗಿಯ ಗೆಲುವು’

ಕೊಡತಗೇರಿ ಎಕ್ಸ್‌ಪ್ರೆಸ್‌ ಸುದ್ದಿ ಡಿಜಿಟಲ್ ಹೌಸ್

ಗದಗ: ಜಿಲ್ಲೆಯ ಗಜೇಂದ್ರಗಡ ತಾಲ್ಲೂಕಿನ ಗೋಗೇರಿ ಗ್ರಾಮದಲ್ಲಿ ಶ್ರೀಗಲವರಾದ ಹಜರತ್ ಸೈಯದ್‌ ಶಾಹಾ ಉರುಸಿನ ಅಂಗವಾಗಿ ಶ್ರೀ ಹುಚ್ಚಿರೇಶ್ವರ ನಾಟ್ಯ ಸಂಘದ ವತಿಯಿಂದ ಒಂದು ಅದ್ಭುತ ಸಾಮಾಜಿಕ ನಾಟಕ ಪ್ರದರ್ಶನ ಏರ್ಪಡಿಸಲಾಗಿದೆ.

ಕಾರ್ಯಕ್ರಮದ ವಿವರ:

ಶ್ರೀ ಕೆ. ಎಸ್. ಕೊಡತಗೇರಿ ವಿರಚಿತ “ಅಣ್ಣನ ಸೋಲು ತಂಗಿಯ ಗೆಲುವು” (ಅರ್ಥಾತ್: ಸತ್ಯವಂತನಿಗೆ ಒಲಿದ ಜಯ) ಎಂಬ ಹೃದಯಸ್ಪರ್ಶಿ ಸಾಮಾಜಿಕ ನಾಟಕವು ದಿನಾಂಕ 05-02-2026, ಗುರುವಾರ ರಾತ್ರಿ 10:00 ಗಂಟೆಗೆ ಗೋಗೇರಿಯ ಸುಂದರ ರಂಗ ವೇದಿಕೆಯಲ್ಲಿ ಪ್ರದರ್ಶನಗೊಳ್ಳಲಿದೆ.

ಉದ್ಘಾಟನೆ ಮತ್ತು ಅತಿಥಿಗಳು:

ಈ ಕಾರ್ಯಕ್ರಮದ ಉದ್ಘಾಟನೆಯನ್ನು ಸನ್ಮಾನ್ಯ ಶ್ರೀ ಜಿ. ಎಸ್. ಪಾಟೀಲರು (ಅಧ್ಯಕ್ಷರು, ಕರ್ನಾಟಕ ರಾಜ್ಯ ನಿಗಮ ಮಂಡಳಿ ಅಭಿವೃದ್ಧಿ ಸಂಸ್ಥೆ ಬೆಂಗಳೂರು ಹಾಗೂ ಶಾಸಕರು ಗದಗ) ನೆರವೇರಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಮುತ್ತಣ್ಣ  ದ್ಯಾಮಣ್ಣ ಲಾವಕ್ಕಿ ಅವರು ವಹಿಸಲಿದ್ದಾರೆ.

​ದಿವ್ಯ ಸಾನಿಧ್ಯವನ್ನು ಶ್ರೀ ಕಳಕಪ್ಪ ಬಿ. ಹಿರೇಮಠ ಮತ್ತು ಶ್ರೀ ಶಂಕ್ರಯ್ಯ  ಮೆಟ್ಟಿನಮಠ, ಶ್ರೀ ದೊಡ್ಡಯ್ಯ ಹೀರೆಮಠ ಅವರು ವಹಿಸಲಿದ್ದು, ನಾಡಿನ ಅನೇಕ ಗಣ್ಯರು, ಜನಪ್ರತಿನಿಧಿಗಳು ಮತ್ತು ಸಮಾಜ ಸೇವಕರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.

error: Content is protected !!