ಬಸ್ಸ್ ಫ್ರೀ ಬಗ್ಗೆ ಟೀಕೆ ಮಾಡುವರಿಗೆ ತನ್ನ FB ಯಲ್ಲಿ ಹಳೆಯ ನೆನಪು ಹಂಚಿಕೊಂಡ ಸರಳಾ

ಕೊಡತಗೇರಿ ಎಕ್ಸ್‌ಪ್ರೆಸ್‌ ಸುದ್ದಿ

ಕಳೆದ 15 ವರ್ಷಗಳ ಹಿಂದಿನ ಒಂದು ನೆನಪು. ಆಗತಾನೆ ಪದವಿ ಮುಗಿದಿತ್ತು. ಸ್ನಾತಕೋತ್ತರ ಪದವಿ ಪ್ರವೇಶಕ್ಕೆ ಇನ್ನೂ ತಿಂಗಳು ಬಾಕಿ ಇತ್ತು. ಹಾಸ್ಟೆಲ್ ವಾಸ್ತವ್ಯದ ಅವಧಿ ಮುಗಿದು ಮನೆಗೆ ಹೋಗಬೇಕಿತ್ತು.

ಆಗ ಖಾಸಗಿ ಸಂಸ್ಥೆಯಲ್ಲಿ ಅರೆಕಾಲಿಕವಾಗಿ ಕೆಲಸ ಮಾಡುತ್ತಾ ವಿದ್ಯಾಭ್ಯಾಸ ಮಾಡುತ್ತಿದ್ದ ನಾನು, ದೂರದ ನನ್ನೂರಿಗೆ ಹೋಗಲು ಸಾಕಷ್ಟು ಹಣದ ಕೊರತೆಯಿಂದ ಸ್ನೇಹಿತೆಯ ಮನೆಯಲ್ಲಿ ಉಳಿದು ರಜೆಯ ಅವಧಿಯಲ್ಲಿ ಪೂರ್ಣಾವಧಿಯ ಕೆಲಸ ಮಾಡಲು ನಿರ್ಧರಿಸಿದ್ದೆ.

ಕೆಲಸಕ್ಕೆ ಅರ್ಜಿ ಹಾಕಲು ಓಡಾಡಬೇಕು. ಹೀಗೆ ಓಡಾಡಲು ಸ್ಟೂಡೆಂಟ್ ಬಸ್ ಪಾಸ್ ಅವಧಿ ಮುಗಿದಿದೆ. ಏನು ಮಾಡೋದು ಎಂದು ಯೋಚಿಸಿ ಟಿನ್ ಫ್ಯಾಕ್ಟರಿ ಸಮೀಪ ಇದ್ದ ನನ್ನ ಸ್ನೇಹಿತೆಯ ಮನೆಯಿಂದ ಮೆಜೆಸ್ಟಿಕ್ ವರೆಗೆ, ಅಲ್ಲಿಂದ ಓಕಳಿಪುರಂ, ಬಸವೇಶ್ವರ ನಗರ, ರಾಜಾಜಿನಗರ ಹೀಗೆ ಹಲವು ಕಡೆ ಎರಡು ದಿನ ನಡೆದುಕೊಂಡೇ ಪ್ರಯಾಣ ಮಾಡಿದೆ.

ಎರಡು ದಿನಗಳ ನಂತರ ನಿರಂತರ ಪ್ರಯಾಣದಿಂದ ತುಂಬಾ ದಣಿವಾಗಿದ್ದ ನನಗೆ ಕಾಲೆತ್ತಿ ಇಡಲಾರದಷ್ಟು ನೋವು, ಜ್ವರ ಕಾಣಿಸಿಕೊಂಡಿತು. ಇದರಿಂದ ಗಾಬರಿಯಾದ ನನ್ನ ಸ್ನೇಹಿತೆ ಹಾಗೂ ಅವಳ ತಾಯಿ ಏನಾಯ್ತು ಎಂದು ಕೇಳಿದಾಗ ಕಳೆದೆರಡು ದಿನಗಳ ದಿನಚರಿ ಅವರಿಗೆ ಹೇಳಿದೆ. ನನ್ನ ಸ್ಥಿತಿಯನ್ನು ಕೇಳಿ ಕಣ್ಣೀರಾದ ಆ ತಾಯಿ ಮಗಳು “ಅಮ್ಮ ಎಂತಾ ಹುಡುಗಿನೇ ನೀನು ನನಗೆ ಹೇಳಿದ್ದರೆ ನಾನು ನಿನಗೆ ಹಣದ ವ್ಯವಸ್ಥೆ ಮಾಡುತ್ತಿದ್ದೆನಲ್ಲ” ಎಂದು ಮರುಗಿದರು.

ತಂದೆ ಇಲ್ಲದ ಆ ಕುಟುಂಬ ಕೂಲಿನಾಲಿ ಮಾಡಿ ಜೀವನ ಸಾಗಿಸುತ್ತಿತ್ತು. ಇಂತದರಲ್ಲಿ ಕೆಲವು ದಿನ ನನಗೆ ಆಶ್ರಯ ಕೊಟ್ಟಿದ್ದೆ ದೊಡ್ಡದು. ಇನ್ನೂ ಹೆಚ್ಚು ಅವರಿಗೆ ಭಾರ ಆಗೋದು ಬೇಡ ಎಂದು ಈ ವಿಷಯ ಅವರಿಗೆ ಹೇಳಿರಲಿಲ್ಲ. ಇದಾದ ಮೇಲೆ ಅವರು ಸ್ವಂತ ಖರ್ಚು ಹಾಕಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಕೆಲಸ ಸಿಗುವವರೆಗೆ ದಿನದ ಪಾಸ್ ತೆಗೆಸಿ ಕೊಡುತ್ತಿದ್ದರು. ಕಷ್ಟದ ದಿನಗಳಲ್ಲಿ ಕೈಹಿಡಿದ ಆ ತಾಯಿಯ ಸಹಾಯ ನಾನೆಂದೂ ಮರೆಯಲಾರೆ.

ಇಂದು ಹೆಣ್ಣುಮಕ್ಕಳಿಗೆ ಉಚಿತವಾಗಿ ಬಸ್ ಪ್ರಯಾಣ ಯೋಜನೆ ಆರಂಭವಾಗಿದೆ. ಹೀಗಾಗಿ ನನ್ನ ಮಾಸದ ಈ ನೋವಿನ ದಿನಗಳು ನೆನಪಾದವು. ಕೆಲವು ಸಲ ಪರ್ಸಲ್ಲಿ 10 ರೂ. ಇರದ ಸ್ಥಿತಿ ಬಂದಿರುತ್ತೆ. ಇನ್ನೂ ಕೆಲವು ಸಲ ಟಿಕೆಟ್ ಗೆ 2 ರೂ. ಕಡಿಮೆ ಇದ್ದುದರಿಂದ ಎರಡು ಸ್ಟಾಪ್ ನಡೆದು ಮುಂದೆ ಹೋಗಿ ಬಸ್ ಹತ್ತಿದ ಪ್ರಸಂಗಗಳೂ ಜೀವನದಲ್ಲಿ ನಡೆದಿವೆ. ಹೀಗಿರುವಾಗ ನಮಗೆ ಸಿಕ್ಕ ಈ ವಿಶಿಷ್ಟ ಅವಕಾಶವನ್ನು ಸಹ ಕೆಲ ಹೆಂಗಸರು ಟೀಕಿಸುತ್ತಿರುವುದು ನೋವಾಗುತ್ತಿದೆ.
✍️ Sarala Satpute

You may have missed

ಸಿದ್ದರಾಮಯ್ಯ: ಅರಸು ದಾಖಲೆ ಸರಿಗಟ್ಟಿದ ‘ಅಹಿಂದ’ ಚಾಣಕ್ಯ – ಜನಪರ ಆಡಳಿತದ ಹೊಸ ಪರ್ವ ​ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ದೀರ್ಘಕಾಲ ಮುಖ್ಯಮಂತ್ರಿಯಾಗಿ ರಾಜ್ಯವಾಳಿದ ಕೀರ್ತಿ ಈವರೆಗೆ ದಿವಂಗತ ಡಿ. ದೇವರಾಜ ಅರಸು (7 ವರ್ಷ 239 ದಿನಗಳು) ಅವರಿಗೆ ಸಲ್ಲುತ್ತಿತ್ತು. ಆದರೆ, ಜನವರಿ 7, 2026ರಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಐತಿಹಾಸಿಕ ದಾಖಲೆಯನ್ನು ಮುರಿದು, ಕರ್ನಾಟಕದ ಇತಿಹಾಸದಲ್ಲಿ ಅತಿ ಸುದೀರ್ಘ ಕಾಲ ಆಡಳಿತ ನಡೆಸಿದ ನಾಯಕನಾಗಿ ಹೊರಹೊಮ್ಮಿದ್ದಾರೆ. ಇದು ಕೇವಲ ಅಂಕಿ-ಅಂಶಗಳ ಸಾಧನೆಯಲ್ಲ, ಬದಲಿಗೆ ಅವರ ಅಚಲ ಸಿದ್ಧಾಂತ ಮತ್ತು ಜನಪ್ರಿಯತೆಯ ಪ್ರತೀಕವಾಗಿದೆ. ​ಅರಸು ಮತ್ತು ಸಿದ್ದರಾಮಯ್ಯ: ಸಮಾಜಮುಖಿ ಹೋಲಿಕೆ ​ದೇವರಾಜ ಅರಸು ಅವರು ಹೇಗೆ ಭೂ ಸುಧಾರಣೆ ಮತ್ತು ಹಿಂದುಳಿದ ವರ್ಗಗಳ ಸಬಲೀಕರಣದ ಮೂಲಕ ‘ಕರ್ನಾಟಕದ ಕ್ರಾಂತಿಕಾರಿ ನಾಯಕ’ ಎನಿಸಿಕೊಂಡರೋ, ಸಿದ್ದರಾಮಯ್ಯನವರು ‘ಅಹಿಂದ’ (ಅಲ್ಪಸಂಖ್ಯಾತ, ಹಿಂದುಳಿದ ಮತ್ತು ದಲಿತ) ವರ್ಗಗಳ ಧ್ವನಿಯಾಗಿ ಅದೇ ಹಾದಿಯಲ್ಲಿ ಮುನ್ನಡೆದಿದ್ದಾರೆ. ಮೈಸೂರು ಮಣ್ಣಿನ ಈ ಇಬ್ಬರು ನಾಯಕರು ಶೋಷಿತ ಸಮುದಾಯಗಳಿಗೆ ರಾಜಕೀಯ ಅಸ್ತಿತ್ವ ತಂದುಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ​ಉತ್ತಮ ಆಡಳಿತದ ಪ್ರಮುಖ ಮೈಲಿಗಲ್ಲುಗಳು ​ಸಿದ್ದರಾಮಯ್ಯನವರ ಆಡಳಿತವನ್ನು ಶ್ಲಾಘಿಸಲು ಮುಖ್ಯ ಕಾರಣ ಅವರ ‘ಜನಪರ ಯೋಜನೆಗಳು’. ಅವರ ಆಡಳಿತ ವೈಖರಿಯಲ್ಲಿ ಆರ್ಥಿಕ ಶಿಸ್ತು ಮತ್ತು ಸಾಮಾಜಿಕ ಭದ್ರತೆಯ ಸುಂದರ ಸಮನ್ವಯವಿದೆ: ​ಭಾಗ್ಯಗಳ ಸರಣಿ: ಮೊದಲ ಅವಧಿಯಲ್ಲಿ (2013-18) ಜಾರಿಗೆ ತಂದ ‘ಅನ್ನಭಾಗ್ಯ’, ‘ಕ್ಷೀರಭಾಗ್ಯ’, ‘ಇಂದಿರಾ ಕ್ಯಾಂಟೀನ್’ನಂತಹ ಯೋಜನೆಗಳು ಬಡವರ ಹಸಿವು ನೀಗಿಸುವಲ್ಲಿ ಮೈಲಿಗಲ್ಲಾದವು. ​ಪಂಚ ಗ್ಯಾರಂಟಿಗಳು: ಎರಡನೇ ಅವಧಿಯಲ್ಲಿ ಜಾರಿಗೆ ತಂದ ಐದು ಗ್ಯಾರಂಟಿಗಳು (ಗೃಹಲಕ್ಷ್ಮಿ, ಶಕ್ತಿ, ಗೃಹಜ್ಯೋತಿ, ಅನ್ನಭಾಗ್ಯ, ಯುವನಿಧಿ) ಇಂದು ರಾಜ್ಯದ ಕೋಟ್ಯಂತರ ಕುಟುಂಬಗಳಿಗೆ ಆರ್ಥಿಕ ಆಸರೆಯಾಗಿವೆ. ​ಆರ್ಥಿಕ ತಜ್ಞತೆ: ರಾಜ್ಯದ ಇತಿಹಾಸದಲ್ಲೇ ಅತಿ ಹೆಚ್ಚು ಅಂದರೆ 16 ಬಾರಿ ಬಜೆಟ್ ಮಂಡಿಸಿದ ಹೆಗ್ಗಳಿಕೆ ಇವರದು. ಆರ್ಥಿಕ ಕೊರತೆಯನ್ನು ಹತೋಟಿಯಲ್ಲಿಟ್ಟುಕೊಂಡು ಅಭಿವೃದ್ಧಿ ಕೆಲಸಗಳಿಗೆ ಹಣ ಮೀಸಲಿಡುವ ಇವರ ಚಾಣಕ್ಯತನ ಮೆಚ್ಚುವಂತದ್ದು. ​ನುಡಿದಂತೆ ನಡೆದ ಸರ್ಕಾರ: ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳನ್ನು ಈಡೇರಿಸುವಲ್ಲಿ ಅವರು ತೋರಿದ ಬದ್ಧತೆ ಮತದಾರರಲ್ಲಿ ಅವರ ಮೇಲಿನ ವಿಶ್ವಾಸವನ್ನು ಹೆಚ್ಚಿಸಿದೆ. ​ತಳಮಟ್ಟದ ನಾಯಕತ್ವ ​ಸಿದ್ದರಾಮಯ್ಯನವರು ಯಾವುದೇ ‘ಹೈಕಮಾಂಡ್’ ನೆರಳಿನಲ್ಲದೆ, ಹಳ್ಳಿ ಹಳ್ಳಿಯ ಜನರೊಂದಿಗೆ ಬೆರೆತು ಬೆಳೆದ ನಾಯಕ. ಅವರ ನೇರ ನುಡಿ, ತರ್ಕಬದ್ಧ ಮಾತುಗಳು ಮತ್ತು ಸಂವಿಧಾನದ ಮೇಲಿನ ಗೌರವ ಅವರನ್ನು ಶ್ರೇಷ್ಠ ಸಂಸದೀಯ ಪಟುವನ್ನಾಗಿ ಮಾಡಿದೆ. ​”ಅಧಿಕಾರ ಎನ್ನುವುದು ಕೇವಲ ಕುರ್ಚಿಯಲ್ಲ, ಅದು ಬಡವರ ಕಣ್ಣೀರು ಒರೆಸುವ ಅವಕಾಶ” ಎಂಬ ಸಿದ್ಧಾಂತದೊಂದಿಗೆ ಅವರು ಮುನ್ನಡೆಯುತ್ತಿರುವುದು ಇಂದಿನ ರಾಜಕಾರಣಿಗಳಿಗೆ ಮಾದರಿಯಾಗಿದೆ. ​ಸಮಾರೋಪ ​ದೇವರಾಜ ಅರಸು ಅವರ ದಾಖಲೆಯನ್ನು ಸರಿಗಟ್ಟಿರುವ ಸಿದ್ದರಾಮಯ್ಯನವರು, ಕರ್ನಾಟಕದ ಸಾಮಾಜಿಕ ನಕ್ಷೆಯಲ್ಲಿ ತಮ್ಮದೇ ಆದ ಅಳಿಸಲಾಗದ ಛಾಪನ್ನು ಒತ್ತಿದ್ದಾರೆ. ಅವರ ಈ ಪಯಣ ಕೇವಲ ಸುದೀರ್ಘ ಅವಧಿಯದ್ದಷ್ಟೇ ಅಲ್ಲದೆ, ‘ಸಮ ಸಮಾಜ’ದ ನಿರ್ಮಾಣದ ಹಾದಿಯಲ್ಲಿ ಒಂದು ಭರವಸೆಯ ನಡಿಗೆಯಾಗಿದೆ.

error: Content is protected !!