ಹೆಣ್ಣು ಮಕ್ಕಳ ರಕ್ಷಣೆ ಪ್ರತಿಯೊಬ್ಬ ನಾಗರೀಕರ ಕರ್ತವ್ಯ : ನೆರೆಗಲ್‍

ಸಸಿ ನೆಡವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು

ಹೆಣ್ಣು ಮಕ್ಕಳ ರಕ್ಷಣೆ ಪ್ರತಿಯೊಬ್ಬ ನಾಗರೀಕರ ಕರ್ತವ್ಯ : ನೆರೆಗಲ್‍

kodatageri express News

 

ಗಜೇಂದ್ರಗಡ : ಹೆಣ್ಣು ಜಗದ ಕಣ್ಣು , ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರದಂತೆ ಎಂಬ ಗಾದೆ ಎಂತೆ ಸಮಾಜದಲ್ಲಿ ಹೆಣ್ಣು ಮಕ್ಕಳನ್ನು ರಕ್ಷಣೆ ಮಾಡುವದು . ಮತ್ತು ಅವರನ್ನು ಗೌರವಿಸುವದು ಪ್ರತಿಯೊಬ್ಬರ ಕರ್ತವ್ಯವಾಗಿ ಎಂದು ಗ್ರಾ.ಪಂ ಅಭಿವೃದ್ದಿ ಅಧಿಕಾರಿಯಾದ ಶರಣಪ್ಪ ನೆರೆಗಲ್ ಹೇಳಿದರು ಅವರು ಸರಕಾರಿ ಪ್ರೌಢ ಶಾಲೆ ಗೋಗೇರಿಯಲ್ಲಿ ರಾಷ್ಟ್ರೀಯ ಹೆಣ್ಣುಮಕ್ಕಳ ದಿನಾಚರಣೆ ಬೇಟಿ ಬಚ್ಚಾವೋ ಬೇಟಿ ಪಡಾವೋ . ಮಗಳನ್ನು ರಕ್ಷಿಸಿ ಮಗಳನ್ನು ಓದಿಸಿ ಕಾರ್ಯಕ್ರಮದಲ್ಲಿ ಸಸಿಗಳನ್ನು ನೆಡವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಮಕ್ಕಳಿಗೆ ಶಿಕ್ಷಣ ನೀಡಲು ಮೊದಲು ತಾಯಿ ಶಿಕ್ಷಣವಂತಳಾಗಿರಬೇಕು ಆಗ ತನ್ನ ಮಕ್ಕಳಿಗೆ ಶಿಕ್ಷಣ ಕೊಡಿಸುತ್ತಾಳೆ ಆದ್ದರಿಂದ ಹೆಣ್ಣು ಮಕ್ಕಳು ಹೆಚ್ಚು ಹೆಚ್ಚು ವಿದ್ಯಾವಂತರಾಗಬೇಕು ಆಗ ಮಾತ್ರ ಸಮಾನತೆ ಕಾಣಲು ಸಾಧ್ಯವಾಗುತ್ತದೆ ಎಂದ ಅವರು. ಇತ್ತಿಚಿಗೆ ನಾವು ಮುಂದೆ ವರೆದಿದ್ದೇವೆ ಎಂದರು ಕೂಡ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ಹೆಚ್ಚಾಗುತ್ತಿವೆ ಎಂತಹ ಬೀಗುವಿನ ಕಾನೂನು ಜಾರಿಗೆ ತಂದರು ಕೂಡ ಅದನ್ನು ದೌರ್ಜನ್ಯ ತಡೆಗಟ್ಟಲು ಸಾಧ್ಯವಾಗುತ್ತಿಲ್ಲಾ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ಮಾಡುವ ಘಾತುಕ ಶಕ್ತಿಗಳಿ ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದರು.

ನಂತರ ಶಾಲೆಯ ಮುಖ್ಯೋಪಧ್ಯಾಯರಾದ ಶ್ರೀಮತಿ ನಾಗನೂರ ಅವರು ಮಾತನಾಡಿ ಹೆಣ್ಣು ಮಕ್ಕಳು ಸಮಾನತೆಯಿಂದ ಬಾಳಬೇಕಾದರೆ ಮೊದಲು ಶಿಕ್ಷಣವಂತೆಯಾಗಬೇಕು ಆದ್ದರಿಂದ ಎಲ್ಲಾ ಹೆಣ್ಣುಮಕ್ಕಳು ಮೊದಲು ಉನ್ನತ ಮಟ್ಟದ ಶಿಕ್ಷಣ ಪಡೆಯಿರಿ , ಎಕೆಂದರೆ ನಾವು ಗ್ರಾಮೀಣ ಮಟ್ಟದಲ್ಲಿ ಇದ್ದೇವೆ ಇಲ್ಲಿ ನಮ್ಮ ಹೆಣ್ಣು ಮಕ್ಕಳನ್ನು ಬೇಗನೆ ಮದುವೆ ಮಾಡಿಕೊಡುತ್ತಾರೆ ಆದ್ದರಿಂದ ಅವರು ಶಿಕ್ಷಣದಿಂದ ವಂಚಿತರಾಗುತ್ತಾರೆ . ನಮ್ಮ ದೇಶದಲ್ಲಿ ಹೆಣ್ಣುಮಕ್ಕಳ ಸಾಕ್ಷರತೆ ನಿಗದಿತ ಮಟ್ಟಕ್ಕೆ ತಲುಪಿಲ್ಲ. ಶೇ.100 ರಲ್ಲಿ ಶೇ.62  ರಷ್ಟು ಮಾತ್ರ ಮಹಿಳೆಯರು ಶಿಕ್ಷಣ ಪಡೆಯುತ್ತಿದ್ದು ಉಳಿದವರು ಶಾಲೆಯಿಂದ ಹೊರಗೆ ಉಳಿಯುತ್ತಿದ್ದಾರೆ.ಉಳಿದ ಶೇ.38 ಹೆಣ್ಣುಮಕ್ಕಳನ್ನು ಶಾಲೆಗೆ ಕರೆದುಕೊಂಡು ಬರುವ ಕೆಲಸ ಆಗಬೇಕಿಗೆ. ಇದಕ್ಕೆ ಪ್ರತಿಯೊಬ್ಬರು ಶ್ರಮೀಸಬೇಕು.ಎಲ್ಲಿಯವರೆಗೆ ನಮ್ಮ ಮನಸ್ಥಿತಿ ಬದಲಾವಣೆ ಆಗುವುದಿಲ್ಲವೋ ಅಲ್ಲಿಯವರೆಗೆ ನಮ್ಮ ದೇಶದಲ್ಲಿ ಪೂರ್ಣ ಪ್ರಮಾಣದಲ್ಲಿ ಹೆಣ್ಣಿನ ಶಿಕ್ಷಣ ದೊರೆಯುವುದಿಲ್ಲ ಎಂದರು.ಭ್ರೂಣಹತ್ಯೆ ನಿಷೇಧ ಕಾನೂನು ಜಾರಿ ಆಗಿದೆ. ಇತ್ತೀಚೆಗೆ  ಹೆಣ್ಣು ಭ್ರೂಣ ಹತ್ಯೆ ಪ್ರಕರಣಗಳು ಕಡಿಮೆ ಆಗಿದೆ ಆದರೆ ಇದರ ಬಗ್ಗೆ ಜಾಗೃತಿ ಅರಿವು ಅಗತ್ಯವಾಗಿದೆ.   ನೈತಕತೆ ಎಂಬುದು ಪ್ರತಿಯೊಬ್ಬರಲ್ಲೂ ಇರಬೇಕು. ಹೆಣ್ಣಿಗೆ ನಾವು ಸಾಧಿಸಲು ಅವಕಾಶ ನೀಡಿಲ್ಲ. ಆಕೆಯಲ್ಲಿ ಕೂಡ ಸಾಧಿಸು ಬಲವಿದೆ ಹಾಗೂ ಈಗಿರುವ ಕಾನೂನಿನ ಅಡಿ ಎಲ್ಲರಿಗೂ ಸಮಾನ ಅವಕಾಶ ಇದೆ.ನಿಮ್ಮ ಹಕ್ಕುಗಳು ಉಲ್ಲಂಘನೆ ಆದ ಸಂದರ್ಭದಲ್ಲಿ ಅದನ್ನು ಕೇಳಿ ಪಡೆವುದು ನಿಮ್ಮ ಹಕ್ಕು ಆಗಿದೆ ಮಹಿಳೆಯರ ರಕ್ಷಣೆಗೆ ಕಾನೂನುಗಳಿವೆ ಅದರ ಬಗ್ಗೆ ಎಲ್ಲರಲ್ಲಿ ಅರಿವು ಇರುವುದು ಅಗತ್ಯವಾಗಿದೆ. ಎಂದರು . ನಂತರ ಕಾರ್ಯಕ್ರಮದಲ್ಲಿ ಕೆ.ಎಸ್.ಕೊಡತಗೇರಿ . ಮಲ್ಲಿಕಾರ್ಜುನ ಗಾರಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ  ಮುತ್ತಣ್ಣ ಲ್ಯಾವಕ್ಕಿ ,ಗ್ರಾ.ಪಂ ಸದಸ್ಯ ಶಂಕ್ರಪ್ಪ ಗುರಿಕಾರ, ಹನುಮಂತ ಮಾದರ ಬಸವರಾಜ ಮಾದರ, ಶಿಕ್ಷರಾದ ಬಳಿಗೇರ, ಶಿಕ್ಷಕಿಯರಾದ ಗೋಗೇರಿ,  ಹಾಗೂ ಗ್ರಾ.ಪಂ. ಸಿಬ್ಬಿಂದಿ ಗಳಾದ ನಬಿಸಾಬ ಬಾಗವಾನ, ದಸ್ತಗಿರಸಾಬ ವಾಲಿಕಾರ, ಕುಮಾರ ಮಾದರ, ಅಂಗನವಾಡಿ ಶಿಕ್ಷಕಿಯರಾದ ದ್ರಾಕ್ಷೀಯಿಣಿ ಗುಂಡೆ, ಕಳಕವ್ವ ಸೂಡಿ, ಸುಶಿಲಾ ಭೋಸಲೆ , ಸರೋಜಾ ಭೋಸಲೆ ಸೇರಿದಂತೆ ವಿದ್ಯಾರ್ಥಿನೀಯರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಹೆಣ್ಣು ಮಗಳನ್ನು ರಕ್ಷಸಿ ಹೆಣ್ಣು ಮಗಳನ್ನು ಓದಿಸಿ ಬಿತ್ತಿ ಪತ್ರವನ್ನು ಪ್ರದರ್ಶಿಸಲಾಯಿತು. ಕಾರ್ಯಕ್ರಮದ ಮೊದಲು ಶಾಲೆಯ ಆವರಣದಲ್ಲಿ ತೆಂಗಿನ ಸಸಿಗಳನ್ನು ನೆಡಲಾಯಿತು.

error: Content is protected !!