ಕುಷ್ಟಗಿ : ತಾಲೂಕಿನ ತಾವರಗೇರ ಪೋಲೀಸ್ ಠಾಣೆಯ ಠಾಣಾಧಿಕಾರಿಯಾದ ಚಂದ್ರಪ್ಪ ಇವರ ನೇತೃತ್ವದಲ್ಲಿ ಹೆಲ್ಮೆಟ್ ಧರಿಸಿ ಜೀವ ಉಳಿಸಿ ಹೆಲ್ಮೆಟ್ ಜಾಗೃತಿ ಬೈಕ್ ರ್ಯಾಲಿ ಸಾರ್ವಜನಿಕರ ಗಮನ ಸೆಳೆಯಿತು.
ಪ್ರತಿ ದಿನ ಹೆಚ್ಚುತ್ತಿರುವ ರಸ್ತೆ ಅಪಘಾತಗಳು ಜೀವ ಹಾನಿಗಳನ್ನು ತಡೆಯುವ ಉದ್ದೇಶದಿಂದ ಹೆಲ್ಮೆಟ್ ದರಿಸುವದು ಸಾರ್ವಜನಿಕರ ಜವಬ್ದಾರಿಯಾಗಿದ್ದು ಎಂದು ಪೊಲೀಸರು ಜಾಗೃತಿ ಮೂಡಿಸಿದರು.
ಈ ಸಂದರ್ಭದಲ್ಲಿ ಪಿಎಸ್ಐ ಚಂದ್ರಪ್ಪ ಎಚ್ ಸೇರಿದಂತೆ ಪೋಲಿಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಹೆಲ್ಮೆಟ್ ಧರಿಸಿ ಬೈಕ್ ಚಲಾಯಿಸುವ ಮೂಲಕ ಜಾಗೃತಿ ಮೂಡಿಸಿದರು.
ತಾವರಗೇರ ಪೋಲಿಸ್ ಠಾಣೆಯಿಂದ ಪ್ರಾರಂಭಗೊಂಡ ಬೈಕ್ ರ್ಯಾಲಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ವೃತ್ತಗಳಲ್ಲಿ ಹೆಲ್ಮೆಟ್ ದರಿಸಿ ಜೀವ ಉಳಿಸಿ ಎಂಬ ಸಂದೇಶ ಜಾಗೃತಿ ಮೂಡಿಸಿ ಮಾತನಾಡಿದ ಪಿ ಎಸ್ ಐ ರವರು ಪ್ರತಿಯೊಬ್ಬ ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ದರುಸಿಯೇ ವಾಹನ ಚಲಾಯಿಸಬೇಕು ಮತ್ತು ಹಿಂಬದಿಯಲ್ಲಿ ಕುಳಿತಿರುವರು ಕೂಡ ಹೆಲ್ಮೆಟ್ ದರಿಸುವದು ಕಡ್ಡಾಯವಾಗಿದೆ ಎಂದು ತಿಳಿಸಿದರು.
ಹೆಲ್ಮೆಟ್ ದರಿಸುವದರಿಂದ ನಮ್ಮ ಅಮೂಲ್ಯ ಜೀವನವನ್ನು ಕಾಪಾಡಿ ಕೊಳ್ಳಬಹುದು ಎಲ್ಲರೂ ಸ್ವಯಂ ಪ್ರೇರಿತರಾಗಿ ರಸ್ತೆ ಸುರಕ್ಷತೆಗೆ ಒತ್ತು ನೀಡಬೇಕು ನಿಯಮ ಪಾಲಿಸಿ ಸುರಕ್ಷಿತವಾಗಿ ಸಂಚರಿಸಿ ಅಪಘಾತ ರಹಿತ ಸಮಾಜ ನಿರ್ಮಿಸೋಣ ಎಂದು ಹೇಳಿದರು.

More Stories
ಜಕ್ಕಲಿಯಲ್ಲಿ ಅಂದಾನಪ್ಪ ದೊಡ್ಡಮೇಟಿ ಸ್ಮಾರಕ ಭವನ ನಿರ್ಮಾಣ: ಜುಲೈ 5ರಂದು ಶಾಸಕ ಜಿ.ಎಸ್. ಪಾಟೀಲರಿಂದ ಭೂಮಿ ಪೂಜೆ
ಗಜೇಂದ್ರಗಡ-ರೋಣ ಭಾಗದಲ್ಲಿ ಪವನ ವಿದ್ಯುತ್ ಯಂತ್ರಗಳ ಹಾವಳಿ: ಕಂಗೆಟ್ಟ ರೈತರು, ಆತಂಕದಲ್ಲಿ ಜನಸಾಮಾನ್ಯರು
ಮಹಿಳೆಯನ್ನು ಸುಟ್ಟ ಕೊಂದ ಆರೋಪಿ ಅಂದರ್