ಕನಕ ಭವನ ನಿರ್ಮಾಣಕ್ಕೆ ನಾಗೇಶ್ ಲಕ್ಕಲಕಟ್ಟಿ ಅವರು ಒಂದು ಲಕ್ಷ ರೂಪಾಯಿಗೆ ದೇಣಿಗೆ
- ಕೊಡತಗೇರಿ ಎಕ್ಸಪ್ರೆಸ್ ಸುದ್ದಿ
ಗಜೇಂದ್ರಗಡ: ಇಂದು ಗಜೇಂದ್ರಗಡದಲ್ಲಿ ಗಜೇಂದ್ರಗಡ ತಾಲೂಕ ಕುರುಬರ ಸಂಘದ ಸಭೆಯನ್ನು ಗಜೇಂದ್ರಗಡದ ಪರ್ವೀಕ್ಷಣ ಮಂದಿರದಲ್ಲಿ ಸಭೆಯನ್ನು ಕರೆಯಲಾಗಿದ್ದು ಸಭೆಯಲ್ಲಿ ನಗರದಲ್ಲಿ ನೂತನವಾಗಿ ಕನಕ ಭವನ ನಿರ್ಮಾಣದ ಕುರಿತು ಚರ್ಚಿಸಲಾಯಿತು ಸಭೆಯಲ್ಲಿ ಸಮಾಜದ ಮುಖಂಡರಾದ ನಾಗೇಶ್ ಲಕ್ಕಲಕಟ್ಟಿ ಅವರು ನಮ್ಮ ನಗರದಲ್ಲಿ ಬೇಗನೆ ಒಂದು ಒಳ್ಳೆಯ ಕನಕ ಭವನ ನಿರ್ಮಾಣವಾಗಬೇಕು ಅದಕ್ಕಾಗಿ ನಾನು ಕಟ್ಟಡ ನಿರ್ಮಾಣಕ್ಕಾಗಿ ಒಂದ ಲಕ್ಷ ನೀಡುತ್ತೇನೆ ಎಂದು ಸ್ಥಳದಲ್ಲಿ ಸಂಘದ ಪದಾಧಿಕಾರಿಗಳಿಗೆ ಒಂದು ಲಕ್ಷ ರೂಪಾಯಿನ ಚೆಕ್ ಅನ್ನು ನೀಡಿದರು.
ಇದಕ್ಕೆ ಎಲ್ಲಾ ಸಂಘದ ಪದಾಧಿಕಾರಿಗಳು ಸಮಾಜದ ಮುಖಂಡರು ಅಭಿನಂದನೆಗಳನ್ನು ಸಲ್ಲಿಸಿದರು ಸಭೆಯಲ್ಲಿ ಸಮಾಜದ ಹಿರಿಯ ಮುಖಂಡರಾದಂತ ವಿ.ಆರ್ ಗುಡಿಸಾಗರ ವಕೀಲರು, ನಾಗೇಶ್ ಲಕ್ಕಲಕಟ್ಟಿಯವರು,ಸಮಾಜದ ತಾಲೂಕ ಅಧ್ಯಕ್ಷರಾದಂತಹ ಅಂದಪ್ಪ ಬಿಚ್ಚೂರ, ಗೌರವ ಅಧ್ಯಕ್ಷರಾದ ಹನುಮಂತಪ್ಪ ಸೊಂಪುರ.ತಾಲೂಕ ಸಮಾಜದ ಕಾರ್ಯದರ್ಶಿಯಾದ ಕೆ.ಎಸ್.ಕೊಡತಗೇರಿ, ಕಂಬಳಿ ಗುರುಗಳು,ನಿಂಗಪ್ಪ ಹಂಡಿ,ಅಶೋಕ ವದೇಗೋಳ,ಸೊಂಪುರ ವಕೀಲರು,ನೀಲಪ್ಪ ಬೂದಿಹಾಳ, ಸೇರಿದಂತೆ ಇತರರು ಉಪಸ್ಥಿತರಿದ್ದರು
More Stories
ಪರೀಕ್ಷೆಯಲ್ಲಿ ಬ್ರಾಹ್ಮಣ ವಿದ್ಯಾರ್ಥಿಗಳ ಜನಿವಾರ ತೆಗೆಸಿದಕ್ಕೆ ಜೋಶಿ ಖಂಡನೆ
ಎಪ್ರಿಲ್ ನಲ್ಲಿ ಜಿಲ್ಲೆಯಾದ್ಯಂತ ನರೇಗಾ ಕೆಲಸ ಪ್ರಾರಂಭ : ಭರತ್ ಎಸ್
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಕರಿಬಸಪ್ಪ ನಿಡಗುಂದಿ ನೇಮಕ