Appointment of Kodatageri as KDP Quarterly Committee Member

ಶಾಸಕ ಜನಾರ್ಧನ ರೆಡ್ಡಿ ವಿರುದ್ಧ ಕ್ರಮಕ್ಕೆ-  ಕುಬೇರ ಮಜ್ಜಿಗಿ ಅಗ್ರಹ

ವಿಚ್ಚೇದನ ಪ್ರಕರಣಗಳಲ್ಲಿ ಮಠಾಧೀಶರ ಮಧ್ಯಸ್ಥೀಕೆ ಎಷ್ಟು ಸರಿ?’.

ಸೆಕೆಂಡ್​ ಹ್ಯಾಂಡ್​​ ಮೊಬೈಲ್ ಬಗ್ಗೆ ಎಚ್ಚರ!: ಬೆಂಗಳೂರಿನಲ್ಲಿ ​6 ತಿಂಗಳಲ್ಲಿ 2,350 ಅಕೌಂಟ್​ಗೆ ಕನ್ನ..!

ಸೆ, 19 ರಂದು ಭಾಗ್ಯನಗರದಲ್ಲಿ ಕೌದಿ ನಾಟಕ ಪ್ರದರ್ಶನ

ಶಾಲೆಗಾಗಿ ಪಡೆದ ಸಿಎ ಸೈಟ್‌ನಲ್ಲಿ ಧಮ್ ಬಿರಿಯಾನಿ ಹೋಟೆಲ್‌! ಛಲವಾದಿ ನಾರಾಯಣ ಸ್ವಾಮಿ ವಿರುದ್ಧ ಆರೋಪ

ವಿಪ್ ಉಲ್ಲಂಘನೆ ಕಾನೂನು ಕ್ರಮ ಒತ್ತಾಯಿಸಿ ಬಿಜೆಪಿ ದೂರು

ಸ್ನೇಹಮಯಿ ಕೃಷ್ಣ ರೌಡಿಶೀಟರ್: ಸಿಎಂ ಕೇಸ್ ನಲ್ಲಿ ಅವರ ಕಡೆಯವರು 100 ಕೋಟಿ ಡೀಲ್ ಗೆ ಬಂದಿದ್ರು -ಎಂ.ಲಕ್ಷ್ಮಣ್

ಜಾತಿ ನಿಂದನೆ ಉದ್ದೇಶವಿದ್ದರೆ ಮಾತ್ರ ಅಟ್ರಾಸಿಟಿ ಕಾಯ್ದೆ ಅನ್ವಯ- ಸುಪ್ರೀಂಕೋರ್ಟ್

ಕಾನೂನು ಮಹಾವಿದ್ಯಾಲಯ ಅಡಿಗಲ್ಲು ಪೂಜೆ

ಯುವಕರ ಧ್ವನಿಯಾಗಿ ಕೆಲಸ ಮಾಡಿವೆ : ಅಕ್ಷಯ ಪಾಟೀಲ

ಮಗಳು ಮೃತಪಟ್ಟಿದ್ದರೂ ಆಸ್ತಿ ಹಕ್ಕು

ಬಿಜೆಪಿ ಪಕ್ಷದ ಜಿಲ್ಲಾ ಪ್ರಕೋಷ್ಠ ಸಾಂಸ್ಕೃತಿಕ ಸಹ ಸಂಚಾಲಕರಾಗಿ ಕಲಾವಿದೆ ಗೀತಾ ಚಿಂತಾಕಲ್ ನೇಮಕ

ಖಾಸಗಿ ಕಂಪನಿಗಳಲ್ಲಿಯು ಕನ್ನಡಿಗರಿಗೆ ಮೀಸಲಾತಿ ನೀಡಬೇಕು ಸ ಶರಣಪ್ಪ ಪಾಟೀಲ

ವ್ಯಕ್ತಿ ಕಾಣೆ: ಪತ್ತೆಗೆ ಸಹಕರಿಸಲು ಮನವಿ

ಶತ ಶತಮಾನದ ಮೊಹರಂಗೆ ಕಳೆ ತುಂಬಿದ ಭಾರತ 

ಜಮೀನು ಮಾರಾಟ ವಂಚನೆ ಪ್ರಕರಣ: ವಕೀಲರ ಸಹಿತ 14 ಮಂದಿ ಮೇಲೆ FIR ದಾಖಲು

ಚಂದನ್‌-ನಿವೇದಿತಾ ಡಿವೋರ್ಸ್‌

ಗದಗ RTO ಅಧಿಕಾರಿ ಲಕ್ಷ್ಮೀಕಾಂತ ರಿಂದ ಸರಕಾರಿ ವಾಹನ ದುರುಪಯೋಗ ಕ್ರಮಕ್ಕೆ ಅಗ್ರಹ

ದಾರಿ ತಪ್ಪುತ್ತಿದಿಯಾ ರಂಗಭೂಮಿ

ಮಗಳು ಮೃತಪಟ್ಟಿದ್ದರೂ ಆಸ್ತಿ ಹಕ್ಕು

ಮಗಳು ಮೃತಪಟ್ಟಿದ್ದರೂ ಆಸ್ತಿ ಹಕ್ಕು

ವಿಚಾರಣೆ ವೇಳೆ ಹೈಕೋರ್ಟ್ ಅಭಿಪ್ರಾಯ | ವಾರಸುದಾರರಿಗೆ ಅಧಿಕಾರ

ಕೊಡತಗೇರಿ Express news

ಬೆಂಗಳೂರು: 2005ರ ಹಿಂದು ಉತ್ತರಾಧಿಕಾರ ಕಾಯ್ದೆಗೆ ತಿದ್ದುಪಡಿ ತರುವ ಮುನ್ನವೇ ಮಗಳು ಮೃತಪಟ್ಟಿದ್ದಾಳೆ ಎನ್ನುವ ಕಾರಣದಿಂದಾಗಿ ಆಕೆಯ ಉತ್ತರಾಧಿಕಾರಿಗಳಿಗೆ ಆಸ್ತಿ ಹಕ್ಕು ಇಲ್ಲ ಎಂದೇಳಲು ಸಾಧ್ಯವಿಲ್ಲ. ಕಾನೂನುಬದ್ಧ ವಾರಸುದಾರರು ಅಸ್ತಿಯಲ್ಲಿ ಸಮಾನ ಪಾಲು ಪಡೆಯಲು ಅರ್ಹರು ಎಂದು ಹೈಕೋರ್ಟ್ ಹೇಳಿದೆ.

ಗದಗ ಜಿಲ್ಲೆಯ ನರಗುಂದ ತಾಲೂಕಿನ ಚನ್ನಬಸಪ್ಪ ಎಂಬುವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಸಚಿನ್ ಶಂಕರ್ ಮಗ್ಟಮ್ ಅವರಿದ್ದ ನ್ಯಾಯಪೀಠ ವಜಾಗೊಳಿಸಿದೆ. ಅರ್ಜಿದಾರರ ಪರ ವಕೀಲರು, ಕಾಯ್ದೆ ತಿದ್ದುಪಡಿಗೂ

ಮೊದಲು ನಾಗವ್ವ ಮತ್ತು ಸಂಗವ್ವ ಹೆಸರಿನ ಹೆಣ್ಣು ಮಕ್ಕಳು ಮೃತಪಟ್ಟಿದ್ದು, ಅವರ ಕಾನೂನು ವಾರಸುದಾರರು ಆಸ್ತಿಯಲ್ಲಿ ಸಮಾನಪಾಲು ಪಡೆಯಲು ಅರ್ಹರಲ್ಲ. ಜತೆಗೆ ಕಾಯ್ದೆಯೂ ಹೆಣ್ಣು ಮಕ್ಕಳ ಉತ್ತರಾಧಿಕಾರಿಗಳಿಗೆ ನೂತನ ಹಕ್ಕನ್ನು ಪರಿಚಯಿಸಿದೆ. ಅದರ ನಿಬಂಧನೆಗಳನ್ನು ಶಾಸಕಾಂಗವು ಸ್ಪಷ್ಟವಾಗಿ ಪೂರ್ವಾವಲೋಕನ ಮಾಡಿಲ್ಲ. ಅಲ್ಲದೇ ಈ ಕಾಯ್ದೆಯೂ 2005 ಸೆ.9ರಂದು ಜಾರಿಗೆ ಬಂದಿದ್ದು, ಆ ವೇಳೆಯಲ್ಲಿ ಜೀವಂತವಾಗಿದ್ದ ಹೆಣ್ಣು ಮಕ್ಕಳಿಗೆ ಮಾತ್ರ ಅನ್ವಯಿಸಲಾಗುತ್ತದೆ ಎಂದು ವಾದಿಸಿದರು.

ವಿಚಾರಣೆ ಆಲಿಸಿದ ಪೀಠವು, 2020ರಲ್ಲಿ ವಿನೀತಾ ಶರ್ಮಾ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಹೇಳಿರುವ ಪ್ರಕಾರ ಹೆಣ್ಣು ಮಕ್ಕಳೂ ಗಂಡು ಮಕ್ಕಳಂತೆ ‘ಕೊ-ಪಾರ್ಸೆನರಿ’ (ಆಸ್ತಿ ಸಮಾನ ಹಕ್ಕು) ಪಡೆಯುತ್ತಾರೆ. ಅವರು

ಪ್ರಕರಣವೇನು?

2023ರ ಅ.3ರಂದು ಗದಗ ಪ್ರಧಾನ ಸಿವಿಲ್ ನ್ಯಾಯಾಲಯ ಮೃತ ಪುತ್ರಿಯರ ಕಾನೂನಾತ್ಮಕ ವಾರಸುದಾರರಿಗೆ ಅವರ ಪೂರ್ವಜರ ಆಸ್ತಿಯಲ್ಲಿ ಸಮಪಾಲು ನೀಡಿ ಆದೇಶಿಸಿತ್ತು. ಆದೇಶ ಪ್ರಶ್ನಿಸಿ ಚನ್ನಬಸಪ್ಪ ಹೈಕೋರ್ಟ್ ಮೇಟ್ಟಿಲೇರಿದ್ದರು.

ತಿದ್ದುಪಡಿಗೆ ಮೊದಲು ಜನಿಸಿದ್ದಾರೋ ಇಲ್ಲವೋ ಎನ್ನುವುದನ್ನು ಪರಿಗಣಿಸಲ್ಲ ಎಂದಿತ್ತು. ಅಲ್ಲದೆ, ವ್ಯಕ್ತಿ ಹುಟ್ಟಿನಿಂದಲೇ ಹಕ್ಕು ಹೊಂದಿರುತ್ತಾನೆಯೇ ಹೊರತು ಉತ್ತರಾಧಿಕಾರದಿಂದಲ್ಲ.

ಇದರನ್ವಯ ಮಗಳು ಜೀವಂತವಾಗಿದ್ದರೂ ಅಥವಾ ಇಲ್ಲದೇ ಹೋದರೂ ಹಕ್ಕು ಪಡೆದಿರುತ್ತಾಳೆ. ತಿದ್ದುಪಡಿ ಕಾಯ್ದೆಯು ಲಿಂಗ ಸಮಾನತೆ ಖಾತ್ರಿಪಡಿಸುತ್ತದೆ. ಹೆಣ್ಣುಮಕ್ಕಳು ಮತ್ತು ಅವರ ವಾರಸುದಾರರು ಅವರ ಸರಿಯಾದ ಪಾಲು ಪಡೆಯಲು ಅವಕಾಶ ಕಲ್ಪಿಸುತ್ತದೆ ಎಂದು ನ್ಯಾಯಾಲಯವು ಹೇಳಿದೆ. ಪೂರ್ವಜರ ಅಸ್ತಿ, ಮಗಳು ತೀರಿಕೊಂಡಾಗ ಆಕೆಯ ಕಾನೂನು ವಾರಸುದಾರರಿಗೆ ಲಭಿಸಲಿದೆ. ಮೃತ ಮಗನ ವಾರಸುದಾರರು ಅಸ್ತಿಯಲ್ಲಿ ಪಾಲುಪಡೆಯುವಂತಾದರೆ, ಕಾಯ್ದೆಯ ಅನುಷ್ಠಾನದ ಸಮಯದಲ್ಲಿ ಮಗಳು ಜೀವಂತವಾಗಿಲ್ಲ ಎನ್ನುವ ನಿಟ್ಟಿನಲ್ಲಿ ಆಕೆಯ ವಾರಸುದಾರರು ಹಕ್ಕು ಪಡೆಯುವಂತಿಲ್ಲ ಎಂದು ಹೇಳುವುದು ಗಂಡು-ಹೆಣ್ಣಿನ ನಡುವೆ ತಾರತಮ್ಮ ಮಾಡಿದಂತಾಗುತ್ತದೆ ಎಂದು ಹೈಕೋರ್ಟ್ ಹೇಳಿದೆ.

 
Appointment of Kodatageri as KDP Quarterly Committee Member - ಶಾಸಕ ಜನಾರ್ಧನ ರೆಡ್ಡಿ ವಿರುದ್ಧ ಕ್ರಮಕ್ಕೆ-  ಕುಬೇರ ಮಜ್ಜಿಗಿ ಅಗ್ರಹ - ವಿಚ್ಚೇದನ ಪ್ರಕರಣಗಳಲ್ಲಿ ಮಠಾಧೀಶರ ಮಧ್ಯಸ್ಥೀಕೆ ಎಷ್ಟು ಸರಿ?'. - ಸೆಕೆಂಡ್​ ಹ್ಯಾಂಡ್​​ ಮೊಬೈಲ್ ಬಗ್ಗೆ ಎಚ್ಚರ!: ಬೆಂಗಳೂರಿನಲ್ಲಿ ​6 ತಿಂಗಳಲ್ಲಿ 2,350 ಅಕೌಂಟ್​ಗೆ ಕನ್ನ..! - ಸೆ, 19 ರಂದು ಭಾಗ್ಯನಗರದಲ್ಲಿ ಕೌದಿ ನಾಟಕ ಪ್ರದರ್ಶನ - ಶಾಲೆಗಾಗಿ ಪಡೆದ ಸಿಎ ಸೈಟ್‌ನಲ್ಲಿ ಧಮ್ ಬಿರಿಯಾನಿ ಹೋಟೆಲ್‌! ಛಲವಾದಿ ನಾರಾಯಣ ಸ್ವಾಮಿ ವಿರುದ್ಧ ಆರೋಪ - ವಿಪ್ ಉಲ್ಲಂಘನೆ ಕಾನೂನು ಕ್ರಮ ಒತ್ತಾಯಿಸಿ ಬಿಜೆಪಿ ದೂರು - ಸ್ನೇಹಮಯಿ ಕೃಷ್ಣ ರೌಡಿಶೀಟರ್: ಸಿಎಂ ಕೇಸ್ ನಲ್ಲಿ ಅವರ ಕಡೆಯವರು 100 ಕೋಟಿ ಡೀಲ್ ಗೆ ಬಂದಿದ್ರು -ಎಂ.ಲಕ್ಷ್ಮಣ್ - ಜಾತಿ ನಿಂದನೆ ಉದ್ದೇಶವಿದ್ದರೆ ಮಾತ್ರ ಅಟ್ರಾಸಿಟಿ ಕಾಯ್ದೆ ಅನ್ವಯ- ಸುಪ್ರೀಂಕೋರ್ಟ್ - ಕಾನೂನು ಮಹಾವಿದ್ಯಾಲಯ ಅಡಿಗಲ್ಲು ಪೂಜೆ
error: Content is protected !!