ಬೂದುಗುಂಪ ಗ್ರಾಮ ಪಂಚಾಯತ್ ಬಿಜೆಪಿ ತೆಕ್ಕೆಗೆ
ಕೊಡತಗೇರಿ ಎಕ್ಸ್ಪ್ರೆಸ್ ಸುದ್ದಿ
ಕೊಪ್ಪಳ ತಾಲೂಕಿನ ಬೂದಗುಂಪ ಗ್ರಾಮ ಪಂಚಾಯಿತಿ ಎರಡನೇ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಎರಡನೇ ಅವಧಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಮುಖಂಡರ ನೇತೃತ್ವದಲ್ಲಿ ಕೆ ಆರ್ ಪಿ ಪಿ ಸದಸ್ಯರನ್ನು ಸೆಳೆದುಕೊಂಡು ಬಿಜೆಪಿ ಬೆಂಬಲಿತ ಅಧ್ಯಕ್ಷ ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು,
ಅಧ್ಯಕ್ಷರಾಗಿ ಲಕ್ಷ್ಮವ್ವ ಸಂಗಟಿ ಮತ್ತು ಉಪಾಧ್ಯಕ್ಷರಾಗಿ ಶರಣಪ್ಪ ಗುತ್ತೂರು ಆಯ್ಕೆಯಾಗಿದ್ದಾರೆ,
ಕೆ ಆರ್ ಪಿ ಪಿ ಪಕ್ಷದ ಸದಸ್ಯರ ಸಂಖ್ಯೆ ಜಾಸ್ತಿ ಇದ್ದರೂ ಕೂಡ ಕೆಲವು ಕೆ ಆರ್ ಪಿ ಪಿ ಸದಸ್ಯರ ಒಡಂಬಡಿಕೆಯಿಂದ ಬಿಜೆಪಿ ಮುಖಂಡರೊಂದಿಗೆ ಗ್ರಾಮ ಪಂಚಾಯಿತಿ ಎರಡನೇ ಅವಧಿಯ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆಯನ್ನು ಮಾಡಲಾಯಿತು,
ಬಿಜೆಪಿ ಮುಖಂಡರಾದ ಎಬಿ ಗುರುರಾಜ್ ಸಿದ್ದಪ್ಪ ಬಾವಿಕಟ್ಟಿ ಕರಿಯಪ್ಪ ಡೊಳ್ಳಿನ್ ಅವರನ್ನು ನೂತನ ಅಧ್ಯಕ್ಷ ಉಪಾಧ್ಯಕ್ಷರು ಮತ್ತು ಸದಸ್ಯರು ಸನ್ಮಾನಿಸಿದರು ಈ ಸಂದರ್ಭದಲ್ಲಿ ದಾಸಪ್ಪ ಕುದುರಿಮೋತಿ, ಬಸವರಾಜ್ ಇಳಿಗೆರ್ ಉರ್ಪ್ ಗುತ್ತೇದಾರ ಅವರು ಉಪಸ್ಥಿತರಿದ್ದರು,
ಕೋಟ್:
ಗ್ರಾಮ ಪಂಚಾಯಿತಿಯಲ್ಲಿ ಅಧಿಕ ಸಂಖ್ಯೆಯಲ್ಲಿ ನಮ್ಮ ಕೆ ಆರ್ ಪಿ ಪಿ ಸದಸ್ಯರು ಇದ್ದರು, ಮೊದಲಿನಿಂದಲೂ ಅಂದರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಉಪಾಧ್ಯಕ್ಷರ ಎರಡನೇ ಅವಧಿಗೆ ಸರ್ಕಾರ ಸುತ್ತೋಲೆ ಹೊರಡಿಸಿದಾಗ ಕೆ ಆರ್ ಪಿ ಪಿ ಮುಖಂಡರು ಎಲ್ಲಾ ಸದಸ್ಯರನ್ನು ಒಟ್ಟುಗೂಡಿಸಿಕೊಂಡು ಕೆಆರ್ ಪಿಪಿಯಲ್ಲಿ ಅಧ್ಯಕ್ಷ ಉಪಾಧ್ಯಕ್ಷ ಆಗಬೇಕು ಅನ್ನುವುದು ತೀರ್ಮಾನಿಸಿದ್ದೆವು ಆದರೆ ಕೆಲವು ಕುತಂತ್ರಿ ಸದಸ್ಯರಿಂದ ಬಿಜೆಪಿಯವರು
ಕೆ ಆರ್ ಪಿ ಪಿ ಸದಸ್ಯರನ್ನು ಸೆಳೆದು ತಮ್ಮ ಬೆಂಬಲಿತ ಪಂಚಾಯಿತಿ ಅಧ್ಯಕ್ಷ ಉಪಾಧ್ಯಕ್ಷರನ್ನಾಗಿ ಮಾಡಿಕೊಂಡಿದ್ದಾರೆ ಇದು ಒಂದು ರೀತಿ ಅನೈತಿಕ ಪಟ್ಟ ಅಂತಲೇ ಹೇಳಬಹುದು, ಇದರ ಬಗ್ಗೆ ಮುಂದೆ ನಮ್ಮ ಪಕ್ಷದ ಹಿರಿಯರು ತೀರ್ಮಾನ ಕೈಗೊಳ್ಳುತ್ತಾರೆ, ಈ ಗುಂಪಿನಲ್ಲಿ ಕರಿಯಣ್ಣ ಸಂಗಟಿ ಅವರು ಕಾಣಿಸಿಕೊಂಡಿರುವುದು ಕೂಡ ನಮಗೆ ದಿಗ್ಭ್ರಮೆ ಉಂಟು ಮಾಡಿದೆ.
: ಗೋವಿಂದರಾಜ್ ಬೂದಗುಂಪ ಮುಖಂಡರು ಕೆ ಆರ್ ಪಿ ಪಿ ಬೂದಗುಂಪ
More Stories
ಕನಕ ಭವನ ನಿರ್ಮಾಣಕ್ಕೆ ನಾಗೇಶ್ ಲಕ್ಕಲಕಟ್ಟಿ ಅವರು ಒಂದು ಲಕ್ಷ ರೂಪಾಯಿಗೆ ದೇಣಿಗೆ
ಪರೀಕ್ಷೆಯಲ್ಲಿ ಬ್ರಾಹ್ಮಣ ವಿದ್ಯಾರ್ಥಿಗಳ ಜನಿವಾರ ತೆಗೆಸಿದಕ್ಕೆ ಜೋಶಿ ಖಂಡನೆ
ಎಪ್ರಿಲ್ ನಲ್ಲಿ ಜಿಲ್ಲೆಯಾದ್ಯಂತ ನರೇಗಾ ಕೆಲಸ ಪ್ರಾರಂಭ : ಭರತ್ ಎಸ್