ಒಳಮೀಸಲಾತಿ ಜಾರಿಗೆ ಆಗ್ರಹ: ಜಗದೀಶ್ ತೊಂಡಿಹಾಳ ರಾಜ್ಯಾಧ್ಯಕ್ಷರು ಬಹುಜನ ದಲಿತ ಸೇನೆ ಕರ್ನಾಟಕ
ಕೊಪ್ಪಳ : ಒಳ ಮೀಸಲಾತಿ ಕರ್ನಾಟಕದ ಪರಿಶಿಷ್ಟ ಜಾತಿಗೆ ಇಂದು ಒಂದು ಹೊಸ ರೂಪದಲ್ಲಿ ಸನ್ಮಾನ್ಯ ಶ್ರೀ ಸಿದ್ದರಾಮಯ್ಯನವರ ಹತ್ತಿರ ಬಂದು ತಲುಪಿದೆ ಬಹುಜನ ದಲಿತರ ಬೇಡಿಕೆಯಾದ ಒಳ ಮೀಸಲಾತಿಯನ್ನು ಮುಂಗಾರು ಅಧಿವೇಶನದಲ್ಲಿ ಘೋಷಿಸುವ ಮೂಲಕಸರ್ಕಾರತನ್ನ ಕಾಳಜಿಯನ್ನ ಮೆರೆಯಬೇಕಾದದು ಅವಶ್ಯಕ ಇರುತ್ತದೆ. ಎಂದು ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರೊಂದಿಗೆಮಾತನಾಡುತ್ತಒಳಮಿಸಲಾತಿಯ ವಿಚಾರವನ್ನು ಪ್ರಸ್ತಾಪಿಸುತ್ತಾ ಶ್ರೀ ಜಗದೀಶ್ ತೊಂಡಿಹಾಳ ವಕೀಲರು ಹಾಗೂ ರಾಜ್ಯಾಧ್ಯಕ್ಷರು ಬಹುಜನ ದಲಿತ ಸೇನೆ ಕರ್ನಾಟಕ ರವರು ಒಳ ಮೀಸಲಾತಿಗೆ ಒತ್ತಾಯಿಸಿದರು.
ದಲಿತಪರ ಕಾಳಜಿಯನ್ನ ಹೊಂದಿರುವಂತಹ ಅಹಿಂದ ನಾಯಕರಾಗಿರುವಂತಹ ಸನ್ಮಾನ್ಯ ಶ್ರೀ ಸಿದ್ದರಾಮಯ್ಯನವರು ಯಾವ ಊಹಾಪೋಹಗಳಿಗೆ ಕಿವಿಕೊಡದೆ ತಮ್ಮ ಆತ್ಮಸಾಕ್ಷಿ ಗೆ ಅನುಗುಣವಾಗಿ ಈಒಂದುಪರಿಸ್ಕೃತ ವರದಿ ಅಂದರೂ ತಪ್ಪಾಗಲಿಕ್ಕಿಲ್ಲ ಮಾನ್ಯ ಗೌರವಾನ್ವಿತ ನಿವೃತ್ತ ನ್ಯಾಯಮೂರ್ತಿಗಳಾಗಿರತಕ್ಕಂತಹ ಶ್ರೀ ನಾಗಮೋಹನ್ ದಾಸ್ ರವರ ಇಂಪೆರಿಕಲ್ ಡೇಟಾ ವನ್ನು ಪರಿಶೀಲಿಸಿ ಒಪ್ಪಿಕೊಂಡು ಬಹುಜನ ದಲಿತರು ಆಗಿರತಕ್ಕಂತ ಒಳ ಮೀಸಲಾತಿಗೆ ಒಳಪಡುವಂತಹ ಜಾತಿಗಳಿಗೆ ನ್ಯಾಯವನ್ನ ಒದಗಿಸುವ ಅವಕಾಶವನ್ನ ಸಂವಿಧಾನದತ್ತವಾಗಿ ಸನ್ಮಾನ್ಯ ಶ್ರೀ ಸಿದ್ದರಾಮಯ್ಯನವರು ತಮ್ಮ ಅವಧಿಯಲ್ಲಿ ಜಾರಿ ಮಾಡಬೇಕೆಂದು ಈ ಮೂಲಕ ಮನವಿಯನ್ನ ಮಾಡಿಕೊಳ್ಳುವ ಜಗದೀಶ್ ತೊಂಡಿಹಾಳ ಅವರು ಆಗ್ರಹಿಸಿದರು.

More Stories
ರಾಜ್ಯದಲ್ಲಿ ಎಲೆಕ್ಷನ್ ಹಬ್ಬ: ಮೇ ತಿಂಗಳಲ್ಲಿ ಪಂಚಾಯತ್ ಚುನಾವಣೆ ಖಚಿತ!
ರಾಜ್ಯ ವಕೀಲರ ಪರಿಷತ್ ಚುನಾವಣೆ: ಬೆಳಗಾವಿಯ ಹಿರಿಯ ವಕೀಲ ಶಿವಪ್ಪ ಸಾದೆಪ್ಪ ಕಿವಾಡಸಣ್ಣವರ ಸ್ಪರ್ಧೆ
ಗ್ರಾಮ ಸಮರಕ್ಕೆ ಮುಹೂರ್ತ ಫಿಕ್ಸ್: ಏಪ್ರಿಲ್-ಮೇ ತಿಂಗಳಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ