ಮಹಿಳೆಯನ್ನು ಸುಟ್ಟ ಕೊಂದ ಆರೋಪಿ ಅಂದರ್
ಕೊಡತಗೇರಿ ಎಕ್ಸ್ಪ್ರೆಸ್ ಡಿಜಿಟಲ್ ಹೌಸ್
ಕೊಪ್ಪಳ : ಸೋಮವಾರ ರಾತ್ರಿ ಕನಕಗಿರಿಯ ಮನೆ ಮಹಡಿ ಮೇಲೆ ಮಹಿಳೆಯನ್ನು ಸುಟ್ಟು ಪೈಶಾಚಿಕ ಕೃತ್ಯ ಎಸಗಿದ್ದ ಆರೋಪಿ ಕುಷ್ಟಗಿ ತಾಲೂಕು ಕಂದಕೂರಿನ ಶಾಮೀದ್ ಸಾಬನನ್ನು ಪೊಲೀಸರು ಬಂಧಿಸಿದ್ದಾರೆ.

ಗುರುತು ಸಿಗದಂತೆ ಸುಡಲ್ಪಟ್ಟ ಮಹಿಳೆ ಕಾರಟಗಿಯ ರತ್ನಮ್ಮ ನಾಯಕ (43) ಎಂದು ಗೊತ್ತಾಗಿದೆ.
ಘಟನೆ ಕುರಿತು ಇಂದು ಮಾತನಾಡಿದ ಕೊಪ್ಪಳ ಎಸ್ಪಿ ಡಾ. ರಾಮ್ ಅವರು ಕನಕಗಿರಿ ಹೊರವಲಯದಲ್ಲಿ ಇರುವ ಸಂಗನಗೌಡ ಮಾಲಿಪಾಟೀಲ್ ಎಂಬುವವರ ನಿರ್ಮಾಣ ಹಂತದ ಮಹಡಿ ಮೇಲಿನ ಕೋಣೆಯಲ್ಲಿ ಸೋಮವಾರ ರಾತ್ರಿ ಮಹಿಳೆಗೆ ಬೆಂಕಿ ಹಚ್ಚಲಾಗಿತ್ತು ಎಂದರು.
ಬೆಂಕಿ ಹೊತ್ತಿದ ದೃಶ್ಯದ ವಿಡಿಯೋ ನೋಡಿ ಇಡಿ ಜಿಲ್ಲೆ ಬೆಚ್ಚಿಬಿದ್ದಿತ್ತು. ಕಾರಟಗಿಯ ರತ್ನಮ್ಮ ಹಾಗೂ ಈ ಶಾಮೀದ್ ಸಾಬ ನಡುವೆ ಕಳೆದ ಮೂರು ತಿಂಗಳಿನಿಂದ ಅಕ್ರಮ ಸಂಬಂಧ ಇತ್ತು.
ಇತ್ತೀಚಿಗೆ ರತ್ನಮ್ಮ ಬೇರೆಯವರ ಜೊತೆ ಅಕ್ರಮ ಸಂಬಂಧ ಇರಬಹುದು ಎಂಬ ಸಂಶಯದಿಂದ ಕನಕಗಿರಿಯ ಹೊರವಲಯದ ಸಂಗನಗೌಡರ ಮನೆ ಮಹಡಿಗೆ ಕರೆದುಕೊಂಡು ಹೋಗಿ ಕುತ್ತಿಗೆ ಹಿಚುಕಿ ನಂತರ ಬೆಂಕಿ ಹಚ್ಚಿ ಈ ಕೃತ್ಯ ಎಸಗಿದ್ದಾನೆ.
ರತ್ಮಮ್ಮ ಮೂರು ಮಕ್ಕಳ ತಾಯಿ ಆಗಿದ್ದು ಗಂಡ ತೀರಿದ್ದಾನೆ. ಶಾಮೀದಸಾಬ ಮೂಲತಃ ಕುಷ್ಟಗಿ ತಾಲೂಕಿನ ಕಂದಕೂರ ಗ್ರಾಮದವನು. ಹುಲಿಹೈದರ್ ನ ಮಹಿಳೆ ಜೊತೆ ವಿವಾಹ ಆಗಿದ್ದಾನೆ. ಈತ ಕಳ್ಳತನವನ್ನೆ ವೃತ್ತಿ ಮಾಡಿಕೊಂಡಿದ್ದು ಠಾಣೆಗಳಲ್ಲಿ ಇತನ ವಿರುದ್ದ ಪ್ರಕರಣ ದಾಖಲಾಗಿವೆ.


More Stories
ಜಕ್ಕಲಿಯಲ್ಲಿ ಅಂದಾನಪ್ಪ ದೊಡ್ಡಮೇಟಿ ಸ್ಮಾರಕ ಭವನ ನಿರ್ಮಾಣ: ಜುಲೈ 5ರಂದು ಶಾಸಕ ಜಿ.ಎಸ್. ಪಾಟೀಲರಿಂದ ಭೂಮಿ ಪೂಜೆ
ಗಜೇಂದ್ರಗಡ-ರೋಣ ಭಾಗದಲ್ಲಿ ಪವನ ವಿದ್ಯುತ್ ಯಂತ್ರಗಳ ಹಾವಳಿ: ಕಂಗೆಟ್ಟ ರೈತರು, ಆತಂಕದಲ್ಲಿ ಜನಸಾಮಾನ್ಯರು
ಶಾಸಕ ಜಿ.ಎಸ್. ಪಾಟೀಲ್ ಅವರಿಗೆ ಸಚಿವ ಸ್ಥಾನ ನೀಡಲು ಒತ್ತಾಯ: ಹುಲಿಗೆಮ್ಮ ದೇವಿ ಸನ್ನಿಧಿಯಲ್ಲಿ ವಿಶೇಷ ಪ್ರಾರ್ಥನೆ